ಕನ್ನಸಂದ್ರದಲ್ಲಿ ಕ್ಷೇತ್ರ ಕಾರ್ಯ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಗ್ರಾಮದ ಪಕ್ಕದಲ್ಲಿ ಇರುವ ಕೆರೆಯಿಂದ ಊರಿಗೆ ಕನ್ನಸಂದ್ರ ಎಂದು ಹೆಸರು ಬಂದಿದೆ. ಕನ್ಯೆ ಸಮುದ್ರ ಎಂದು ಕರೆಯಲಾಗುತ್ತಿತ್ತು. ನಂತರ ಕನ್ನಸಂದ್ರ ಎಂದು ಬಳಕೆಗೆ ಬಂದಿರಬಹುದು. ಶಿಥಿಲವಾಗಿರುವ ಬಸವಣ್ಣ ದೇವಾಲಯವಿದೆ. ಕಂಬದಲ್ಲಿ ಬಸವಣ್ಣನನ್ನು ಕೆತ್ತಲಾಗಿದೆ. ಹೊಯ್ಸಳರ ಕಾಲದ ಮಹಾಸತಿ ಕಲ್ಲು ರಕ್ಷಣೆ ಇಲ್ಲದೆ ಪಾಳುಮನೆ ಒಳಗೆ ಪತ್ತೆಯಾಗಿದೆ. ಇತಿಹಾಸ ತಜ್ಞರಾದ ಡಾ.ಎಚ್.ಎಸ್.ಗೋಪಾಲ್ ರಾವ್ ತಂಡದವರನ್ನು ಕನ್ನಸಂದ್ರಕ್ಕೆ ಕರೆದೊಯ್ದು ಗ್ರಾಮದ ಬಗ್ಗೆ ತಳಸ್ಪರ್ಶಿ ಅಧ್ಯಯನ ನಡೆಸಲಾಗುವುದು ಎಂದರು.