ವಿಮಾನ ನಿಲ್ದಾಣದ ಅಧಿಕಾರಿ ವೆಂಕಟರಮಣ್ ಮಾತನಾಡಿ, ಸಾರ್ವಜನಿಕ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಒತ್ತಡ ಕೆಲಸದ ನಡುವೆಯೂ ಕನ್ನಡತನ, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಭಾಷೆ, ನಾಡು, ಸಂಸ್ಕೃತಿಯ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ನಿಲ್ದಾಣದಿಂದ ಸಾಹಿತ್ಯ ಲೋಕದ ದಿಗ್ಗಜರೊಂದಿಗೆ ಚರ್ಚೆ, ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು.