ಮಲೆನಾಡು ಗಿಡ್ಡ ಮತ್ತು ಬಯಲು ಸೀಮೆ ಹಳ್ಳಿಕಾರ್ ತಳಿಗಳು ಅತ್ಯುತ್ತಮ ಹಾಲು, ಮೊಸರು ನೀಡುವ ತಳಿಗಳು ಎಂಬುದು ಪಶು ವೈದ್ಯಾಧಿಕಾರಿಗಳ ಅಭಿಪ್ರಾಯ. ನಾಟಿ ಹಸುಗಳಿಂದ ಉತ್ಪಾದನೆಯಾಗುವ ಸೆಗಣಿ ಮತ್ತು ಗಂಜಲ ಅನೇಕ ರೋಗಗಳಿಗೆ ರಾಮಬಾಣ. ಆಯುರ್ವೇದ ಔಷಧದಲ್ಲಿ 48 ರೋಗಗಳಿಗೆ ಬಳಕೆ ಮಾಡುವ ಮಾತ್ರೆ, ಕಷಾಯ, ಮುಲಾಮುಗಳಿಗೆ ಹೆಚ್ಚಾಗಿ ಗಂಜಲ ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ಬೈಚಾಪುರ ಗ್ರಾಮದ ಪಾರಂಪರಿಕ ನಾಟಿ ವೈದ್ಯ ವೆಂಕಟರಾಜು.