ಟೋಕನ್ ನೀಡಿ ಇಂತಹ ಸಮಯಕ್ಕೆ ಬನ್ನಿ ಎಂದರೂ ಜನ ಅಂಗಡಿ ಮುಂದೆ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಒಬ್ಬರ ಪಡಿತರವನ್ನು ಬೇರೆಯವರಿಗೆ ನೀಡಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಎಷ್ಟು ಜನ ಪಡಿತರದಾರರು ಇದ್ದಾರೋ ಅಷ್ಟೂ ಜನರಿಗೆ ತಕ್ಕಂತೆಯೇ ಆಹಾರ ಧಾನ್ಯ ಸರಬರಾಜು ಆಗಿರುತ್ತದೆ. ನಾವು ಕಾರ್ಡ್ದಾರರಿಗೆ ನೀಡಲೇಬೇಕು. ಇಲ್ಲವಾದರೆ ಸರ್ಕಾರಕ್ಕೆ ಹಿಂದಿರುಗಿಸಬೇಕು ಇದು ನಿಯಮ. ಇದಲ್ಲದೆ ಸರ್ಕಾರ 50ಜನರಿಗೆ ಮಾತ್ರ ಟೋಕನ್ ನೀಡಿ ಅವರಿಗೆ ಮಾತ್ರ ಪಡಿತರ ವಿತರಿಸಲು ಹೇಳಿದೆ. ಆದರೆ, ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಮಾತ್ರ ಊಟದ ಸಮಯ ಹೊರತುಪಡಿಸಿ 100 ಜನಕ್ಕೆ ವಿತರಣೆ ಮಾಡುತ್ತಿದ್ದೇವೆ. ಎಲ್ಲರಿಗೂ ರೇಷನ್ ಸಿಗಲಿದ್ದು, ಮುಗಿಬೀಳುವ ಅವಶ್ಯ ಇಲ್ಲ ಎನ್ನುತ್ತಾರೆ ನ್ಯಾಯಬೆಲೆ ಅಂಗಡಿ ಶಿವು.