ಈ ಸಂದರ್ಭದಲ್ಲಿ ಮಾಹಿತಿ ನೀಡಿದ ರೈತ ಧನಂಜಯ, ಸ.ನಂ134ರಲ್ಲಿ 133ರೈತರು ಕಳೆದ ಅರವತ್ತು ವರ್ಷಗಳಿಂದ ಸಾಗುವಳಿ ಪತ್ರ ಪಡೆದು ಸ್ವಾಧೀನದಲ್ಲಿದ್ದರು. ಕಳೆದ ವರ್ಷ ಈ ಹಿಂದಿನ ಜಿಲ್ಲಾಧಿಕಾರಿ ಕರೀಗೌಡ ನ್ಯಾಯಾಲಯದ ಸಂಕೀರ್ಣಕ್ಕಾಗಿ 3.20ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಬೊಮ್ಮವಾರ ಗ್ರಾಮದಲ್ಲಿ ಈ ಹಿಂದೆಯೇ ಸರ್ಕಾರ 8ಎಕರೆ ಭೂಮಿ ಮಂಜೂರು ಮಾಡಿದೆ ಎಂದು ವಿವರಿಸಿದರು.