ಸ್ಥಳಕ್ಕೆ ಬಂದಿದ್ದ ಪೊಲೀಸರು, ಮೇಲ್ಛಾವಣಿ ಮೂಲಕ ಸ್ಥಳೀಯರೊಬ್ಬರನ್ನು ಇಳಿಸಿ, ಒಳಗೆ ಹಾಕಿದ್ದ ಚಿಲಕ ತೆಗೆಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಬೆರಳಚ್ಚು ತಜ್ಞರನ್ನು ಕರೆಯಿಸಿ ಬೆರಳಚ್ಚು ಪಡೆದುಕೊಂಡಿದ್ದಾರೆ. ಕಳ್ಳರ ಪತ್ತೆಗಾಗಿ ಸಮೀಪದ ಕಟ್ಟಡಗಳಲ್ಲಿನ ಸಿ.ಸಿ.ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.