ಪುರಸಭೆ ಮಾಜಿ ಸದಸ್ಯ ಆರ್.ಕುಮಾರ್ ಮಾತನಾಡಿ, ವೆಂಕಟಪ್ಪ ಬಡಾವನೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಮರಗಳನ್ನು ಬುಡದಿಂದ ಒಂದರೆಡು ಅಡಿ ಬಿಟ್ಟು ಸಂಪೂರ್ಣವಾಗಿ ಮಟ್ಟ ಹಾಕಲಾಗಿದೆ. ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕಟಾವು ಮಾಡಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಬೆಸ್ಕಾಂ ಅಧಿಕಾರಿಗಳು ಮುಂಗಾರು ಆರಂಭಕ್ಕೆ ಮೊದಲು ಎಲ್ಲಾ ಲೈನ್ ಮೆನ್ಗಳನ್ನು ಒಂದೆಡೆ ಸಭೆ ನಡೆಸಿ ಮರಗಳ ರಂಬೆ – ಕಟಾವು ಮಾಹಿತಿ ನೀಡಬೇಕು. ಆದರೆ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.