‘ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ, ನರೇಗಾ ಯೋಜನೆಯಡಿ ಜಲ ಸಂವರ್ಧನೆ, ಜಲ ಮರುಪೂರಣಕ್ಕಾಗಿ ಚೆಕ್ ಡ್ಯಾಂ, ಬದುನಿರ್ಮಾಣ, ಇಂಗು ಗುಂಡಿ, ಕೃಷಿ ಹೊಂಡದ ಮೂಲಕ ಹನಿ ನೀರು ಸಂಗ್ರಹಣೆಕ್ಕೆ ಒತ್ತು ನೀಡುತ್ತಿವೆ. ಪ್ರತಿ ಮನೆಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಮಳೆ ಕೊಯ್ಲು ಕುರಿತು ಜಾಗೃತಿ ಮೂಡಿಸುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಹರಸಾಹಸ ಪಡುತ್ತಿರುವಾಗ ನೀರು ವ್ಯರ್ಥವಾಗುತ್ತಿರುವುದು ನೋವುಂಟು ಮಾಡಿದೆ’ ಎನ್ನುತ್ತಾರೆ ಮಾಳಿಗೆನಹಳ್ಳಿ ಪ್ರಕಾಶ್.