ಅಥಣಿ ತಾಲ್ಲೂಕಿನ ಅನಂತಪುರದ ಅಂಬರೀಷ ಸೋಮಲಿಂಗ ದುಗ್ಗಾಣಿ ನೀಡಿದ ದೂರಿನ ಮೇಲೆಗೆ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ‘₹ 6ಸಾವಿರ ಬೇಡಿಕೆ ಇಟ್ಟಿದ್ದ ನಾಗಪ್ಪ ಮುಂಗಡವಾಗಿ ₹ 3ಸಾವಿರ ಪಡೆದಿದ್ದರು. ಉಳಿದ ₹ 3ಸಾವಿರ ಪಡೆಯುವಾಗ ಅವರು ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಲಂಚವಾಗಿ ಪಡೆದ ಹಣವನ್ನು ಅವರಿಂದ ವಸೂಲಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.