ಕೆಎಲ್ಎಸ್ ಐಎಂಇಆರ್ ಜಿಸಿ ಅಧ್ಯಕ್ಷ ಆರ್.ಎಸ್. ಮುತಾಲಿಕ್ ದೇಸಾಯಿ, ‘ಸಾಧನೆ ಜೀವನದುದ್ದಕ್ಕೂ ಮುಂದುವರಿಯಬೇಕು. ಪ್ರಶಸ್ತಿ ಪಡೆಯುವುದು ಪ್ರಾರಂಭವೇ ಹೊರತು ಅಂತ್ಯವಲ್ಲ. ನೈತಿಕ ಮೌಲ್ಯಗಳನ್ನು ಅನುಸರಿಸುವ ಮೂಲಕ ಸಮಾಜ ಮತ್ತು ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.