<p><strong>ಬೆಳಗಾವಿ: </strong>‘ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಇರುತ್ತದೆ. ಅದನ್ನು ಪ್ರದರ್ಶಿಸುವ ಅವಕಾಶಗಳನ್ನು ಅನ್ವೇಷಿಸಿಕೊಳ್ಳಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಪದ್ಮಸಾಲಿ ಹೇಳಿದರು.</p>.<p>ಇಲ್ಲಿನ ಹಿಂದವಾಡಿಯ ಕರ್ನಾಟಕ ಲಾ ಸೊಸೈಟಿಯ ಐಎಂಇಆರ್ನಲ್ಲಿ ಪಠ್ಯೇತರ, ಸಹಪಠ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಾಗಿ ಸೋಮವಾರ ನಡೆದ ಸಾಧಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಡಿಜಿಟಲ್ ಜ್ಞಾನವು ತಾತ್ಕಾಲಿಕ. ಆದರೆ ಪುಸ್ತಕಗಳನ್ನು ಓದುವುದರಿಂದ ಮತ್ತು ಶಿಕ್ಷಕರೊಂದಿಗೆ ವೈಯಕ್ತಿಕ ಸಂವಹನ ನಡೆಸುವುದರಿಂದ ಹೆಚ್ಚಿನ ಪ್ರಯೋಜನವಿದೆ’ ಎಂದು ತಿಳಿಸಿದರು.</p>.<p>ಕೆಎಲ್ಎಸ್ ಐಎಂಇಆರ್ ಜಿಸಿ ಅಧ್ಯಕ್ಷ ಆರ್.ಎಸ್. ಮುತಾಲಿಕ್ ದೇಸಾಯಿ, ‘ಸಾಧನೆ ಜೀವನದುದ್ದಕ್ಕೂ ಮುಂದುವರಿಯಬೇಕು. ಪ್ರಶಸ್ತಿ ಪಡೆಯುವುದು ಪ್ರಾರಂಭವೇ ಹೊರತು ಅಂತ್ಯವಲ್ಲ. ನೈತಿಕ ಮೌಲ್ಯಗಳನ್ನು ಅನುಸರಿಸುವ ಮೂಲಕ ಸಮಾಜ ಮತ್ತು ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.</p>.<p>ನಿರ್ದೇಶಕ ಡಾ.ಅತುಲ್ ಆರ್. ದೇಶಪಾಂಡೆ ಸ್ವಾಗತಿಸಿದರು. ರಿತಿಕಾ ಮತ್ತು ಐಶ್ವರ್ಯಾ ನಿರೂಪಿಸಿದರು. ಗಾಂಧಾಲಿ ಮತ್ತು ಭಾಗ್ಯಶ್ರೀ ಪರಿಚಿಯಿಸಿದರು. ಪ್ರೊ.ಶ್ರೀರಂಗ್ ದೇಶಪಾಂಡೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಇರುತ್ತದೆ. ಅದನ್ನು ಪ್ರದರ್ಶಿಸುವ ಅವಕಾಶಗಳನ್ನು ಅನ್ವೇಷಿಸಿಕೊಳ್ಳಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಪದ್ಮಸಾಲಿ ಹೇಳಿದರು.</p>.<p>ಇಲ್ಲಿನ ಹಿಂದವಾಡಿಯ ಕರ್ನಾಟಕ ಲಾ ಸೊಸೈಟಿಯ ಐಎಂಇಆರ್ನಲ್ಲಿ ಪಠ್ಯೇತರ, ಸಹಪಠ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಾಗಿ ಸೋಮವಾರ ನಡೆದ ಸಾಧಕರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಡಿಜಿಟಲ್ ಜ್ಞಾನವು ತಾತ್ಕಾಲಿಕ. ಆದರೆ ಪುಸ್ತಕಗಳನ್ನು ಓದುವುದರಿಂದ ಮತ್ತು ಶಿಕ್ಷಕರೊಂದಿಗೆ ವೈಯಕ್ತಿಕ ಸಂವಹನ ನಡೆಸುವುದರಿಂದ ಹೆಚ್ಚಿನ ಪ್ರಯೋಜನವಿದೆ’ ಎಂದು ತಿಳಿಸಿದರು.</p>.<p>ಕೆಎಲ್ಎಸ್ ಐಎಂಇಆರ್ ಜಿಸಿ ಅಧ್ಯಕ್ಷ ಆರ್.ಎಸ್. ಮುತಾಲಿಕ್ ದೇಸಾಯಿ, ‘ಸಾಧನೆ ಜೀವನದುದ್ದಕ್ಕೂ ಮುಂದುವರಿಯಬೇಕು. ಪ್ರಶಸ್ತಿ ಪಡೆಯುವುದು ಪ್ರಾರಂಭವೇ ಹೊರತು ಅಂತ್ಯವಲ್ಲ. ನೈತಿಕ ಮೌಲ್ಯಗಳನ್ನು ಅನುಸರಿಸುವ ಮೂಲಕ ಸಮಾಜ ಮತ್ತು ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.</p>.<p>ನಿರ್ದೇಶಕ ಡಾ.ಅತುಲ್ ಆರ್. ದೇಶಪಾಂಡೆ ಸ್ವಾಗತಿಸಿದರು. ರಿತಿಕಾ ಮತ್ತು ಐಶ್ವರ್ಯಾ ನಿರೂಪಿಸಿದರು. ಗಾಂಧಾಲಿ ಮತ್ತು ಭಾಗ್ಯಶ್ರೀ ಪರಿಚಿಯಿಸಿದರು. ಪ್ರೊ.ಶ್ರೀರಂಗ್ ದೇಶಪಾಂಡೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>