<p><strong>ಬೆಳಗಾವಿ</strong>: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿಸಿದ ಮತ್ತು ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿದ ಆರೋಪಿ ಅಕ್ಬರ್ ಪಾಷಾಗೆ ಸೋಮವಾರ ರಾತ್ರಿ ನಾಗ್ಪುರದಿಂದ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.</p>.<p>ಅಕ್ಬರ್ ಪಾಷಾನನ್ನು ವಿಚಾರಣೆಗಾಗಿ ನಾಗ್ಪುರ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಮುಗಿದಿದ್ದರಿಂದ ವಿಮಾನದ ಮೂಲಕ ಕರೆತಂದು, ಮತ್ತೆ ಜೈಲಿಗೆ ಸೇರಿಸಲಾಯಿತು.</p>.<p>‘ಹಿಂಡಲಗಾ ಜೈಲಿನಲ್ಲಿರುವ ಕೊಲೆ ಅಪರಾಧಿ ಜಯೇಶ್ ಪೂಜಾರಿ ಉರೂಫ್ ಶಾಕೀರ್ ಮೊಹಮ್ಮದ್, 2023ರ ಜನವರಿ ಹಾಗೂ ಮಾರ್ಚ್ನಲ್ಲಿ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ. ತಾನು ದಾವೂದ್ ಇಬ್ರಾಹಿಂನ ಸಹಚರ, ತನಗೆ ₹ 100 ಕೋಟಿ ಕೊಡದಿದ್ದರೆ ಬಾಂಬ್ ಸ್ಫೋಟಿಸಿ ಸಚಿವರನ್ನು ಹತ್ಯೆ ಮಾಡುವೆ ಎಂದು ಹೇಳಿದ್ದ. ಜಯೇಶ್ನ ಜತೆಗಿದ್ದ ಅಕ್ಬರ್ ಪಾಷಾನೇ ಈ ದೂರವಾಣಿ ಕರೆಯ ಸೂತ್ರಧಾರ ಎಂದು ಪೊಲೀಸರಿಗೆ ಗೊತ್ತಾಗಿತ್ತು. ವಿಚಾರಣೆಗಾಗಿ ನಾಗ್ಪುರ ಪೊಲೀಸರು ಅಕ್ಬರ್ ಪಾಷಾನನ್ನು ಕರೆದೊಯ್ದಿದ್ದರು’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿಸಿದ ಮತ್ತು ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿದ ಆರೋಪಿ ಅಕ್ಬರ್ ಪಾಷಾಗೆ ಸೋಮವಾರ ರಾತ್ರಿ ನಾಗ್ಪುರದಿಂದ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.</p>.<p>ಅಕ್ಬರ್ ಪಾಷಾನನ್ನು ವಿಚಾರಣೆಗಾಗಿ ನಾಗ್ಪುರ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಮುಗಿದಿದ್ದರಿಂದ ವಿಮಾನದ ಮೂಲಕ ಕರೆತಂದು, ಮತ್ತೆ ಜೈಲಿಗೆ ಸೇರಿಸಲಾಯಿತು.</p>.<p>‘ಹಿಂಡಲಗಾ ಜೈಲಿನಲ್ಲಿರುವ ಕೊಲೆ ಅಪರಾಧಿ ಜಯೇಶ್ ಪೂಜಾರಿ ಉರೂಫ್ ಶಾಕೀರ್ ಮೊಹಮ್ಮದ್, 2023ರ ಜನವರಿ ಹಾಗೂ ಮಾರ್ಚ್ನಲ್ಲಿ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ. ತಾನು ದಾವೂದ್ ಇಬ್ರಾಹಿಂನ ಸಹಚರ, ತನಗೆ ₹ 100 ಕೋಟಿ ಕೊಡದಿದ್ದರೆ ಬಾಂಬ್ ಸ್ಫೋಟಿಸಿ ಸಚಿವರನ್ನು ಹತ್ಯೆ ಮಾಡುವೆ ಎಂದು ಹೇಳಿದ್ದ. ಜಯೇಶ್ನ ಜತೆಗಿದ್ದ ಅಕ್ಬರ್ ಪಾಷಾನೇ ಈ ದೂರವಾಣಿ ಕರೆಯ ಸೂತ್ರಧಾರ ಎಂದು ಪೊಲೀಸರಿಗೆ ಗೊತ್ತಾಗಿತ್ತು. ವಿಚಾರಣೆಗಾಗಿ ನಾಗ್ಪುರ ಪೊಲೀಸರು ಅಕ್ಬರ್ ಪಾಷಾನನ್ನು ಕರೆದೊಯ್ದಿದ್ದರು’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>