<p><strong>ಅಥಣಿ(ಬೆಳಗಾವಿ ಜಿಲ್ಲೆ):</strong> ತಾಲ್ಲೂಕಿನ ಅಡಹಳ್ಳಟ್ಟಿಯ ನಾಯಿಕ ವಸತಿ ತೋಟದ ರಸ್ತೆ ಹಾಳಾಗಿರುವ ಕಾರಣ, ಮನೆಯವರೆಗೆ ಆಂಬುಲೆನ್ಸ್ ಬಾರದೆ ಬಾಣಂತಿ ಮತ್ತು ಶಿಶುವನ್ನು 1.5 ಕಿ.ಮೀ ಹೆಗಲ ಮೇಲೆ ಹೊತ್ತು ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿದ ಘಟನೆ ಗುರುವಾರ ನಡೆದಿದೆ.</p>.<p>ಗರ್ಭಿಣಿ ಶಿಲ್ಪಾ ನಾಯಿಕ ಅವರಿಗೆ ಗುರುವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಆಂಬುಲೆನ್ಸ್ಗೆ ಕರೆ ಮಾಡಿದ್ದರು. ಆದರೆ, ರಸ್ತೆ ಹಾಳಾದ ಕಾರಣ ಮನೆಯವರೆಗೆ ಆಂಬುಲೆನ್ಸ್ ಬರುವುದಿಲ್ಲ ಎಂದು ಚಾಲಕ ಹೇಳಿದರು. ಈ ಮಧ್ಯೆ, ಶಿಲ್ಪಾ ಮನೆಯಲ್ಲೇ ಶಿಶುವಿಗೆ ಜನ್ಮ ನೀಡಿದರು. ಹೆರಿಗೆ ನಂತರ ಬಾಣಂತಿ ಮತ್ತು ಶಿಶುವನ್ನು ಹೆಗಲ ಮೇಲೆ ಹೊತ್ತು, ಕಾಲ್ನಡಿಗೆ ಮೂಲಕ ಕುಟುಂಬದವರು ಸಾಗಿದರು. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ–ಮಗು ಇಬ್ಬರೂ ಈಗ ಆರೋಗ್ಯದಿಂದ ಇದ್ದಾರೆ.</p>.<p>ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ರಸ್ತೆ ಸುಧಾರಣೆಗೆ ಅನುದಾನ ಮಂಜೂರಾದರೂ, ಕಾಮಗಾರಿ ಕೈಗೊಳ್ಳದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಈ ರಸ್ತೆ ಕಾಮಗಾರಿ ಮಾರ್ಚ್ನಲ್ಲೇ ಕೈಗೊಳ್ಳಬೇಕಿತ್ತು. ಅನಿವಾರ್ಯ ಕಾರಣದಿಂದ ವಿಳಂಬವಾಗಿದೆ’ ಎಂದು ಪಿಡಿಒ ಸಿದ್ದಪ್ಪ ತುಂಗಳ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ(ಬೆಳಗಾವಿ ಜಿಲ್ಲೆ):</strong> ತಾಲ್ಲೂಕಿನ ಅಡಹಳ್ಳಟ್ಟಿಯ ನಾಯಿಕ ವಸತಿ ತೋಟದ ರಸ್ತೆ ಹಾಳಾಗಿರುವ ಕಾರಣ, ಮನೆಯವರೆಗೆ ಆಂಬುಲೆನ್ಸ್ ಬಾರದೆ ಬಾಣಂತಿ ಮತ್ತು ಶಿಶುವನ್ನು 1.5 ಕಿ.ಮೀ ಹೆಗಲ ಮೇಲೆ ಹೊತ್ತು ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿದ ಘಟನೆ ಗುರುವಾರ ನಡೆದಿದೆ.</p>.<p>ಗರ್ಭಿಣಿ ಶಿಲ್ಪಾ ನಾಯಿಕ ಅವರಿಗೆ ಗುರುವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಆಂಬುಲೆನ್ಸ್ಗೆ ಕರೆ ಮಾಡಿದ್ದರು. ಆದರೆ, ರಸ್ತೆ ಹಾಳಾದ ಕಾರಣ ಮನೆಯವರೆಗೆ ಆಂಬುಲೆನ್ಸ್ ಬರುವುದಿಲ್ಲ ಎಂದು ಚಾಲಕ ಹೇಳಿದರು. ಈ ಮಧ್ಯೆ, ಶಿಲ್ಪಾ ಮನೆಯಲ್ಲೇ ಶಿಶುವಿಗೆ ಜನ್ಮ ನೀಡಿದರು. ಹೆರಿಗೆ ನಂತರ ಬಾಣಂತಿ ಮತ್ತು ಶಿಶುವನ್ನು ಹೆಗಲ ಮೇಲೆ ಹೊತ್ತು, ಕಾಲ್ನಡಿಗೆ ಮೂಲಕ ಕುಟುಂಬದವರು ಸಾಗಿದರು. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ–ಮಗು ಇಬ್ಬರೂ ಈಗ ಆರೋಗ್ಯದಿಂದ ಇದ್ದಾರೆ.</p>.<p>ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ರಸ್ತೆ ಸುಧಾರಣೆಗೆ ಅನುದಾನ ಮಂಜೂರಾದರೂ, ಕಾಮಗಾರಿ ಕೈಗೊಳ್ಳದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಈ ರಸ್ತೆ ಕಾಮಗಾರಿ ಮಾರ್ಚ್ನಲ್ಲೇ ಕೈಗೊಳ್ಳಬೇಕಿತ್ತು. ಅನಿವಾರ್ಯ ಕಾರಣದಿಂದ ವಿಳಂಬವಾಗಿದೆ’ ಎಂದು ಪಿಡಿಒ ಸಿದ್ದಪ್ಪ ತುಂಗಳ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>