<p><strong>ಬೆಳಗಾವಿ:</strong> ‘ನೆಲೆಗಾಣದ ಮತ್ತು ನೆಲೆಗಾಣಲು ಪರದಾಡುವ ನಿರ್ಲಕ್ಷಿತ ವ್ಯಕ್ತಿಗಳ ಜಗತ್ತನ್ನು ತಮ್ಮ ಕಥೆ, ಕಾದಂಬರಿಗಳ ಮೂಲಕ ಸಮಾಜದೆದುರು ತೆರೆದಿಟ್ಟವರು ಬಸವರಾಜ ಕಟ್ಟೀಮನಿ’ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.</p>.<p>ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬಸವರಾಜ ಕಟ್ಟೀಮನಿ ಅವರ ಜನ್ಮ ದಿನಾಚರಣೆ ಮತ್ತು ಸಾಕ್ಷಿಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದರು.</p>.<p>‘ಇದ್ದವರು, ಇಲ್ಲದವರು ಕುರಿತು ಮನಪೂರ್ವಕವಾಗಿ ಚಿಂತಿಸುವಂತೆ ಮಾಡುವುದೇ ಸಾಹಿತ್ಯದ ಉದ್ದೇಶವೆಂದು ಪ್ರತಿಪಾದಿಸುತ್ತ ಬಂದ ಕಟ್ಟೀಮನಿಯವರು, ತಾವು ಯಾರ ಕುರಿತು ಬರೆದರೋ ತಮ್ಮ ನಿಜ ಜೀವನದಲ್ಲಿ ಅಂಥವರ ಕುರಿತೇ ಹೋರಾಟ ಮಾಡಿದವರು’ ಎಂದರು.</p>.<p>ಪರಿಸರವಾದಿ ಶಿವಾಜಿ ಕಾಗಣೀಕರ ಅವರು ಬಸವರಾಜ ಕಟ್ಟೀಮನಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾನುವಾರ ನಿಧನರಾದ ಕಥೆಗಾರ ಮೊಗಳ್ಳಿ ಗಣೇಶ್ ಕುರಿತು ಸಾಹಿತಿ ಡಿ.ಎಸ್. ಚೌಗಲೆ, ಸಿದ್ದರಾಮ ತಳವಾರ್ ನುಡಿ ನಮನ ಸಲ್ಲಿಸಿದರು.</p>.<p>ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಸದಸ್ಯೆ ಕೆ.ಆರ್. ಸಿದ್ದಗಂಗಮ್ಮ ವಂದಿಸಿದರು. ದೇಮಣ್ಣ ಸೊಗಲದ ಮತ್ತು ಬಾಲಕೃಷ್ಣ ನಾಯಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ನೆಲೆಗಾಣದ ಮತ್ತು ನೆಲೆಗಾಣಲು ಪರದಾಡುವ ನಿರ್ಲಕ್ಷಿತ ವ್ಯಕ್ತಿಗಳ ಜಗತ್ತನ್ನು ತಮ್ಮ ಕಥೆ, ಕಾದಂಬರಿಗಳ ಮೂಲಕ ಸಮಾಜದೆದುರು ತೆರೆದಿಟ್ಟವರು ಬಸವರಾಜ ಕಟ್ಟೀಮನಿ’ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.</p>.<p>ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬಸವರಾಜ ಕಟ್ಟೀಮನಿ ಅವರ ಜನ್ಮ ದಿನಾಚರಣೆ ಮತ್ತು ಸಾಕ್ಷಿಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದರು.</p>.<p>‘ಇದ್ದವರು, ಇಲ್ಲದವರು ಕುರಿತು ಮನಪೂರ್ವಕವಾಗಿ ಚಿಂತಿಸುವಂತೆ ಮಾಡುವುದೇ ಸಾಹಿತ್ಯದ ಉದ್ದೇಶವೆಂದು ಪ್ರತಿಪಾದಿಸುತ್ತ ಬಂದ ಕಟ್ಟೀಮನಿಯವರು, ತಾವು ಯಾರ ಕುರಿತು ಬರೆದರೋ ತಮ್ಮ ನಿಜ ಜೀವನದಲ್ಲಿ ಅಂಥವರ ಕುರಿತೇ ಹೋರಾಟ ಮಾಡಿದವರು’ ಎಂದರು.</p>.<p>ಪರಿಸರವಾದಿ ಶಿವಾಜಿ ಕಾಗಣೀಕರ ಅವರು ಬಸವರಾಜ ಕಟ್ಟೀಮನಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾನುವಾರ ನಿಧನರಾದ ಕಥೆಗಾರ ಮೊಗಳ್ಳಿ ಗಣೇಶ್ ಕುರಿತು ಸಾಹಿತಿ ಡಿ.ಎಸ್. ಚೌಗಲೆ, ಸಿದ್ದರಾಮ ತಳವಾರ್ ನುಡಿ ನಮನ ಸಲ್ಲಿಸಿದರು.</p>.<p>ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಸದಸ್ಯೆ ಕೆ.ಆರ್. ಸಿದ್ದಗಂಗಮ್ಮ ವಂದಿಸಿದರು. ದೇಮಣ್ಣ ಸೊಗಲದ ಮತ್ತು ಬಾಲಕೃಷ್ಣ ನಾಯಕ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>