‘ಮೈಸೂರು ದಸರಾ ಮಾದರಿಯಲ್ಲಿ ಆಚರಿಸಿ’
‘ಬೆಳಗಾವಿಯಲ್ಲಿ ಶತಮಾನದಿಂದ ಸಡಗರದಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ದೇಶದಲ್ಲೇ ಎರಡನೇ ದೊಡ್ಡ ಉತ್ಸವ ಇಲ್ಲಿ ನೆರವೇರುತ್ತದೆ. ಈ ವರ್ಷ ರಾಜ್ಯ ಸರ್ಕಾರವು ಇದನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಿಸಬೇಕು. ಗಣೇಶೋತ್ಸವ ಮಂಟಪಗಳಿಗೆ ಪೊಲೀಸ್ ಭದ್ರತೆ ಒದಗಿಸಬೇಕು. ಗಣೇಶನ ವೀಕ್ಷಣೆಗೆ ಬರುವ ಸಾವಿರಾರು ಜನರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳದವರು ಮನವಿ ಮಾಡಿದರು.