ಇಲ್ಲಿ ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಮಹಾಜನ್ ಆಯೋಗದ ವರದಿಯೇ ಅಂತಿಮ. ಇನ್ಮುಂದೆ ನಾವೂ, ಮುಂಬೈ ನಮ್ಮದೇ ಎಂದು ಕೇಳಲು ಶುರು ಮಾಡಬೇಕು. ಚಳವಳಿ ನಡೆಸಬೇಕು. ಆಗ, ಮಹಾರಾಷ್ಟ್ರದ ನಾಯಕರು ಬೆಳಗಾವಿ ಮೊದಲಾದ ಪ್ರದೇಶಗಳನ್ನು ಕೇಳುವುದನ್ನು ನಿಲ್ಲಿಸುತ್ತಾರೆ’ ಎಂದರು.