<p><strong>ಬೆಳಗಾವಿ:</strong> ಪ್ರತಿ ಟನ್ ಕಬ್ಬಿಗೆ ₹3,300 ನೀಡುವ ಕುರಿತು ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಸ್ವಾಗತಿಸಿ, ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದರು.</p>.ಪ್ರತಿ ಟನ್ ಕಬ್ಬಿಗೆ ₹3,300: ರಾಜ್ಯ ಸರ್ಕಾರದಿಂದ ಪರಿಷ್ಕೃತ ದರ ನಿಗದಿ.<p>ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ರೈತರ ಹಿತಾಸಕ್ತಿ ಕಾಪಾಡಲು ನಮ್ಮ ಸಂಘಟನೆ ಸದಾ ಬೆಂಬಲಕ್ಕೆ ಸಿಗುತ್ತದೆ. ಕಬ್ಬು ಬೆಳೆಗಾರರಿಗೆ ನ್ಯಾಯಯುತವಾದ ದರ ಕೊಡಿಸುವ ಹೋರಾಟದಲ್ಲೂ ಭಾಗಿಯಾಗಿದೆ. ನಾಡು–ನುಡಿಗೆ ಧಕ್ಕೆ ಬಂದಾಗ ರೈತರು ನಮ್ಮೊಂದಿಗೆ ನಿಲ್ಲಬೇಕು. ನಾವೂ ರೈತರ ಬೆನ್ನಿಗೆ ಸದಾ ಇದ್ದೇವೆ’ ಎಂದರು.</p><p>‘ಶೇ 11.25 ರಿಕವರಿ ಹೊಂದಿದ ಕಬ್ಬಿನ ಬೆಳೆಗೆ ಮಾತ್ರ ಟನ್ಗೆ ₹3,300 ನೀಡಿದರೆ ಸಾಲದು. ಅದಕ್ಕಿಂತ ಕಡಿಮೆ ರಿಕವರಿ ಇದ್ದರೂ, ಟನ್ಗೆ ₹3,300 ಕೊಡಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡಬಾರದು’ ಎಂದೂ ಮನವಿ ಮಾಡಿದರು.</p><p>ಮುಖಂಡರಾದ ಸುರೇಶ ಗವನ್ನವರ ಗಣೇಶ ರೋಕಡೆ, ಹೊಳೆಪ್ಪ ಸುಲಧಾಳ, ಸತೀಶ ಗುಡದವರ, ರಮೇಶ ಯರಗನ್ನವರ, ವಿನಾಯಕ ಹಟ್ಟಿಹೊಳಿ, ಕರಣ ಚವ್ಹಾಣ, ವಿನಾಯಕ ಭೋವಿ, ಸಂಪತ ಸಕ್ರೆನ್ನವರ ಇದ್ದರು.</p> .ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ₹3,300, ಸರ್ಕಾರ ₹200 ನೀಡಲಿ: ಬೊಮ್ಮಾಯಿ ಸಲಹೆ
<p><strong>ಬೆಳಗಾವಿ:</strong> ಪ್ರತಿ ಟನ್ ಕಬ್ಬಿಗೆ ₹3,300 ನೀಡುವ ಕುರಿತು ರಾಜ್ಯ ಸರ್ಕಾರ ಕೈಗೊಂಡ ನಿರ್ಣಯ ಸ್ವಾಗತಿಸಿ, ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದರು.</p>.ಪ್ರತಿ ಟನ್ ಕಬ್ಬಿಗೆ ₹3,300: ರಾಜ್ಯ ಸರ್ಕಾರದಿಂದ ಪರಿಷ್ಕೃತ ದರ ನಿಗದಿ.<p>ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ರೈತರ ಹಿತಾಸಕ್ತಿ ಕಾಪಾಡಲು ನಮ್ಮ ಸಂಘಟನೆ ಸದಾ ಬೆಂಬಲಕ್ಕೆ ಸಿಗುತ್ತದೆ. ಕಬ್ಬು ಬೆಳೆಗಾರರಿಗೆ ನ್ಯಾಯಯುತವಾದ ದರ ಕೊಡಿಸುವ ಹೋರಾಟದಲ್ಲೂ ಭಾಗಿಯಾಗಿದೆ. ನಾಡು–ನುಡಿಗೆ ಧಕ್ಕೆ ಬಂದಾಗ ರೈತರು ನಮ್ಮೊಂದಿಗೆ ನಿಲ್ಲಬೇಕು. ನಾವೂ ರೈತರ ಬೆನ್ನಿಗೆ ಸದಾ ಇದ್ದೇವೆ’ ಎಂದರು.</p><p>‘ಶೇ 11.25 ರಿಕವರಿ ಹೊಂದಿದ ಕಬ್ಬಿನ ಬೆಳೆಗೆ ಮಾತ್ರ ಟನ್ಗೆ ₹3,300 ನೀಡಿದರೆ ಸಾಲದು. ಅದಕ್ಕಿಂತ ಕಡಿಮೆ ರಿಕವರಿ ಇದ್ದರೂ, ಟನ್ಗೆ ₹3,300 ಕೊಡಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರಿಗೆ ಮೋಸ ಮಾಡಬಾರದು’ ಎಂದೂ ಮನವಿ ಮಾಡಿದರು.</p><p>ಮುಖಂಡರಾದ ಸುರೇಶ ಗವನ್ನವರ ಗಣೇಶ ರೋಕಡೆ, ಹೊಳೆಪ್ಪ ಸುಲಧಾಳ, ಸತೀಶ ಗುಡದವರ, ರಮೇಶ ಯರಗನ್ನವರ, ವಿನಾಯಕ ಹಟ್ಟಿಹೊಳಿ, ಕರಣ ಚವ್ಹಾಣ, ವಿನಾಯಕ ಭೋವಿ, ಸಂಪತ ಸಕ್ರೆನ್ನವರ ಇದ್ದರು.</p> .ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ₹3,300, ಸರ್ಕಾರ ₹200 ನೀಡಲಿ: ಬೊಮ್ಮಾಯಿ ಸಲಹೆ