‘ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ಬಿಟ್ಟು ಹೋದವರು ಮರಳಿ ಮಾತೃ ಪಕ್ಷಕ್ಕೆ ಬರಲಿದ್ದಾರೆ. ಅವರನ್ನು ಕರೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಎರಡೂ ಕಡೆ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಶಿರಗೂರ, ಪಿಕೆಪಿಎಸ್ ಅಧ್ಯಕ್ಷ ಹನುಮಂತ ರಬಕವಿ, ಲಕ್ಷ್ಮಣ ಮಂಗಿ, ಮಾರುತಿ ಹನುಮನ್ನವರ, ಮುತ್ತೆಪ್ಪ ಹನುಮನ್ನವರ, ಮಲ್ಲೇಶ ಹನುಮಂತಗೋಳ, ಮಾರುತಿ ಪೆಡ್ಡಾರೆ, ಸಿದ್ದು ಖಿಂಡಿ, ವಿಠ್ಠಲ ಚಿಂಚಲಿ, ಗುಂಡು ಪೆಡ್ಡಾರಿ, ಸಲ್ಮಾನ್ ನಾಯಕವಾಡಿ, ಬೀರಪ್ಪ ಡೋಣಿ, ಲಕ್ಷ್ಮಣ ಹನುಮನ್ನವರ, ಭೀಮಪ್ಪ ಹಂಜಾನಟ್ಟಿ ಇದ್ದರು.