ವಿವಿಧೆಡೆ ಲಸಿಕಾ ಅಭಿಯಾನಕ್ಕೆ ಲಕ್ಷ್ಮಿ ಚಾಲನೆ

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಹಿಂಡಲಗಾ ಮತ್ತು ಬೆಳಗುಂದಿ ಗ್ರಾಮದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಚಾಲನೆ ನೀಡಿದರು.
‘ಕೋವಿಡ್ 2ನೇ ಅಲೆ ಪ್ರಸ್ತುತ ನಿಯಂತ್ರಣಕ್ಕೆ ಬಂದಿದೆ. ಆದರೆ, ನಾವು ಮೈಮರೆಯುವುದ ಬೇಡ. ಎಚ್ಚರಿಕೆಯಿಂದಿದ್ದು, 3ನೇ ಅಲೆ ಬಾರದಂತೆ ತಡೆಯಬೇಕು. ಅನಿವಾರ್ಯತೆ ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು’ ಎಂದು ಸಲಹೆ ನೀಡಿದರು.
‘ಕೋವಿಡ್ ಲಸಿಕೆ ಬಗ್ಗೆ ಕೆಲವರಿಗೆ ಭಯವಿದೆ. ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದು ಸಲ್ಲದು. ಭಯ ಪಡದೆ ತೆಗೆದುಕೊಂಡು ಆದಷ್ಟು ಸೋಂಕಿನಿಂದ ದೂರವಿರಬೇಕು. ಚಿಕ್ಕಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು’ ಎಂದು ತಿಳಿಸಿದರು.
ಡಾ.ರಾಮಕೃಷ್ಣ, ಅಶೋಕ ಗೌಡ, ಹೇಮಾ ಹಡಗಳ, ಬಾಲಕೃಷ್ಣ ಲೋಹಾರ, ಗೀತಾ ದೇಕೊಳ್ಕರ, ಪ್ರಲ್ಹಾದ ಚಿರಮುರ್ಕರ, ಸೋಮನ ಗೌಡ, ಅಶ್ವಿನಿ ಕುಂದಲ, ಟಿಎಚ್ಒ ಡಾ.ಶಿವಾನಂದ ಮಾಸ್ತಿಹೊಳಿ, ಡಾ.ರಾಜು ಕುಪ್ಳೆಕರ, ಕೃಷ್ಣ ಪಾವಸೆ, ಪ್ರಕಾಶ ಬೆಳಗುಂದಕರ, ವಿಠ್ಠಲ ದೇಸಾಯಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.