<p><strong>ಬೆಳಗಾವಿ:</strong> ‘ಕಲೆಯು ಬದುಕು ಕಟ್ಟಿಕೊಡುವ ಮಹಾಶಕ್ತಿ ಹೊಂದಿದೆ’ ಎಂದು ಖ್ಯಾತ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಹೇಳಿದರು.</p>.<p>ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕಲಾತ್ಮಕ ಬದುಕಿನೊಂದಿಗೆ ಸಮಾಜ ಪರ ಕಾಳಜಿ ಹೊಂದಬಹುದು. ದೇಶ ದ್ರೋಹ ಮತ್ತು ಸಮಾಜ ದ್ರೋಹದಂತಹ ನಕಾರಾತ್ಮಕತೆಯಿಂದ ದೂರವಿದ್ದು ಪ್ರಗತಿಶೀಲ ಮನಸ್ಸನ್ನು ಹೊಂದಲು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕಲೆಯ ಆಸಕ್ತಿ ಬಹು ಮುಖ್ಯವಾದುದಾಗಿದೆ. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ’ ಎಂದರು.</p>.<p>‘ಕಲೆಗೆ ದೈವತ್ವದ ಸ್ಪರ್ಶವಿದ್ದಾಗ ಮಾತ್ರ ಪ್ರತಿಭೆ ಹುಟ್ಟುತ್ತದೆ. ಜೀವನದಲ್ಲಿ ಗುರಿ ಸಾಧಿಸಬೇಕಾದರೆ, ಪಠ್ಯ ಮತ್ತು ಪಠ್ಯೇತರ ಆಸಕ್ತಿಗಳನ್ನು ಸಮ ತೂಕದಲ್ಲಿ ನಿಭಾಯಿಸಬೇಕು. ತಂದೆ-ತಾಯಿ, ಗುರುಗಳನ್ನು ಗೌರವಿಸಬೇಕು. ಕನ್ನಡ ನಾಡು-ನುಡಿ ಸಂಸ್ಕೃತಿಗಾಗಿ ಎಲ್ಲರೂ ದುಡಿಯಬೇಕು’ ಎಂದು ತಿಳಿಸಿದರು.</p>.<p>‘ಉತ್ತರ ಕರ್ನಾಟಕದ ಭಾವ, ಭಾಷೆಯ ಜನಪದ ಗೀತೆಗಳಲ್ಲಿ ಇರುವ ಗತ್ತು, ಗಮ್ಮತ್ತು ಹಾಗೂ ಸೊಗಡು ಮತ್ತ್ಯಾವುದರಲ್ಲೂ ಸಿಗುವುದಿಲ್ಲ’ ಎಂದ ಅವರು, ‘ಚುಟು ಚುಟು ಅಂತೈತಿ’ ಹಾಗೂ ‘ಮಧುರಾ ಪಿಸುಮಾತಿಗೆ’ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.</p>.<p>ಅಂತರರಾಷ್ಟ್ರೀಯ ಕ್ರೀಡಾಪಟು ಮೋಯಿನ್ ಎಂ. ಜುನ್ನೇದಿ ಮಾತನಾಡಿ, ‘ಕ್ರೀಡೆ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪೂರಕವಾಗಿದೆ. ಯೋಗ ಮತ್ತು ಪ್ರಾಣಾಯಾಮಗಳು ಜೀವನಶೈಲಿಯನ್ನು ಸಮತೋಲನದಲ್ಲಿಡುತ್ತವೆ. ಹೀಗಾಗಿಯೇ ಕ್ರೀಡೆಗೆ ಇಂದು ಜಾಗತಿಕ ಮನ್ನಣೆ ದೊರತಿದೆ’ ಎಂದರು.</p>.<p>ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಮಾತನಾಡಿ, ‘ಈವರೆಗೂ ಮುನ್ನೂರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ಜುನ್ನೇದಿ ಅವರು ತಮ್ಮ ಅಂಗವಿಕಲ್ಯ ಮೀರಿ ಅಂತರರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸ್ಪರ್ಧಾತ್ಮಕ ಮನೋಭಾವಗಳು ವಿದ್ಯಾರ್ಥಿ ಬದುಕಿನ ಮೂರು ಯಶಸ್ವಿ ಸೂತ್ರಗಳಾಗಿವೆ. ಸಾಂಸ್ಕೃತಿಕ ಮನಸ್ಸು ಪ್ರತಿಭೆಗಳನ್ನು ಹುಟ್ಟು ಹಾಕುತ್ತದೆ. ದೈಹಿಕ ನ್ಯೂನತೆಗಳು ಸಾಧನೆಗಳಿಗೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ’ ಎಂದರು.</p>.<p>ಡಾ.ಶಮಿತಾ ಮಲ್ನಾಡ್ ಮತ್ತು ಮೋಯಿನ್ ಎಂ. ಜುನ್ನೇದಿ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.</p>.<p>ರಶ್ಮಿ ಹಲಕರ್ಣಿ, ವಾಣ ಬೈರಶಟ್ಟಿ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು. ಜಿಮ್ಖಾನಾ ಸಾಂಸ್ಕೃತಿಕ ಉಪಾಧ್ಯಕ್ಷೆ ಡಾ.ಮಹೇಶ್ವರಿ ಕಾಚಾಪೂರ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರೊ.ಎಸ್.ಒ. ಹಲಸಗಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಬಾಳಿಕಾಯಿ ಪರಿಚಯಿಸಿದರು. ಕಾವೇರಿ ಗುಂತಕಲ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಕಲೆಯು ಬದುಕು ಕಟ್ಟಿಕೊಡುವ ಮಹಾಶಕ್ತಿ ಹೊಂದಿದೆ’ ಎಂದು ಖ್ಯಾತ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಹೇಳಿದರು.</p>.<p>ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕಲಾತ್ಮಕ ಬದುಕಿನೊಂದಿಗೆ ಸಮಾಜ ಪರ ಕಾಳಜಿ ಹೊಂದಬಹುದು. ದೇಶ ದ್ರೋಹ ಮತ್ತು ಸಮಾಜ ದ್ರೋಹದಂತಹ ನಕಾರಾತ್ಮಕತೆಯಿಂದ ದೂರವಿದ್ದು ಪ್ರಗತಿಶೀಲ ಮನಸ್ಸನ್ನು ಹೊಂದಲು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕಲೆಯ ಆಸಕ್ತಿ ಬಹು ಮುಖ್ಯವಾದುದಾಗಿದೆ. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ’ ಎಂದರು.</p>.<p>‘ಕಲೆಗೆ ದೈವತ್ವದ ಸ್ಪರ್ಶವಿದ್ದಾಗ ಮಾತ್ರ ಪ್ರತಿಭೆ ಹುಟ್ಟುತ್ತದೆ. ಜೀವನದಲ್ಲಿ ಗುರಿ ಸಾಧಿಸಬೇಕಾದರೆ, ಪಠ್ಯ ಮತ್ತು ಪಠ್ಯೇತರ ಆಸಕ್ತಿಗಳನ್ನು ಸಮ ತೂಕದಲ್ಲಿ ನಿಭಾಯಿಸಬೇಕು. ತಂದೆ-ತಾಯಿ, ಗುರುಗಳನ್ನು ಗೌರವಿಸಬೇಕು. ಕನ್ನಡ ನಾಡು-ನುಡಿ ಸಂಸ್ಕೃತಿಗಾಗಿ ಎಲ್ಲರೂ ದುಡಿಯಬೇಕು’ ಎಂದು ತಿಳಿಸಿದರು.</p>.<p>‘ಉತ್ತರ ಕರ್ನಾಟಕದ ಭಾವ, ಭಾಷೆಯ ಜನಪದ ಗೀತೆಗಳಲ್ಲಿ ಇರುವ ಗತ್ತು, ಗಮ್ಮತ್ತು ಹಾಗೂ ಸೊಗಡು ಮತ್ತ್ಯಾವುದರಲ್ಲೂ ಸಿಗುವುದಿಲ್ಲ’ ಎಂದ ಅವರು, ‘ಚುಟು ಚುಟು ಅಂತೈತಿ’ ಹಾಗೂ ‘ಮಧುರಾ ಪಿಸುಮಾತಿಗೆ’ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.</p>.<p>ಅಂತರರಾಷ್ಟ್ರೀಯ ಕ್ರೀಡಾಪಟು ಮೋಯಿನ್ ಎಂ. ಜುನ್ನೇದಿ ಮಾತನಾಡಿ, ‘ಕ್ರೀಡೆ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪೂರಕವಾಗಿದೆ. ಯೋಗ ಮತ್ತು ಪ್ರಾಣಾಯಾಮಗಳು ಜೀವನಶೈಲಿಯನ್ನು ಸಮತೋಲನದಲ್ಲಿಡುತ್ತವೆ. ಹೀಗಾಗಿಯೇ ಕ್ರೀಡೆಗೆ ಇಂದು ಜಾಗತಿಕ ಮನ್ನಣೆ ದೊರತಿದೆ’ ಎಂದರು.</p>.<p>ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಮಾತನಾಡಿ, ‘ಈವರೆಗೂ ಮುನ್ನೂರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ಜುನ್ನೇದಿ ಅವರು ತಮ್ಮ ಅಂಗವಿಕಲ್ಯ ಮೀರಿ ಅಂತರರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸ್ಪರ್ಧಾತ್ಮಕ ಮನೋಭಾವಗಳು ವಿದ್ಯಾರ್ಥಿ ಬದುಕಿನ ಮೂರು ಯಶಸ್ವಿ ಸೂತ್ರಗಳಾಗಿವೆ. ಸಾಂಸ್ಕೃತಿಕ ಮನಸ್ಸು ಪ್ರತಿಭೆಗಳನ್ನು ಹುಟ್ಟು ಹಾಕುತ್ತದೆ. ದೈಹಿಕ ನ್ಯೂನತೆಗಳು ಸಾಧನೆಗಳಿಗೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ’ ಎಂದರು.</p>.<p>ಡಾ.ಶಮಿತಾ ಮಲ್ನಾಡ್ ಮತ್ತು ಮೋಯಿನ್ ಎಂ. ಜುನ್ನೇದಿ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.</p>.<p>ರಶ್ಮಿ ಹಲಕರ್ಣಿ, ವಾಣ ಬೈರಶಟ್ಟಿ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು. ಜಿಮ್ಖಾನಾ ಸಾಂಸ್ಕೃತಿಕ ಉಪಾಧ್ಯಕ್ಷೆ ಡಾ.ಮಹೇಶ್ವರಿ ಕಾಚಾಪೂರ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರೊ.ಎಸ್.ಒ. ಹಲಸಗಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಬಾಳಿಕಾಯಿ ಪರಿಚಯಿಸಿದರು. ಕಾವೇರಿ ಗುಂತಕಲ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>