ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ತಪ್ಪದ ಜಲಕ್ಷಾಮ, ಜಲಚರಗಳ ಮಾರಣಹೋಮ
ಚಂದ್ರಶೇಖರ ಎಸ್. ಚಿನಕೇಕರ
Published : 8 ಏಪ್ರಿಲ್ 2024, 6:33 IST
Last Updated : 8 ಏಪ್ರಿಲ್ 2024, 6:33 IST
ಫಾಲೋ ಮಾಡಿ
Comments
ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿಯ ನೋಟ
ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ನೀರಿಲ್ಲದೇ ಮೀನುಗಳು ಸತ್ತಿವೆ
ಮೊಸಳೆ ಹಾವಳಿ ಸಾಧ್ಯತೆ
ಕೃಷ್ಣಾ ನದಿ ತೀರದ ಪೊಟರೆಗಳಲ್ಲಿ ನೂರಾರು ಮೊಸಳೆಗಳು ವಾಸವಾಗಿವೆ. ಇಷ್ಟು ದಿನಗಳ ಕಾಲ ಹರಿಯುವ ನದಿಯಲ್ಲಿಯೇ ಮೊಸಳೆಗಳಿಗೆ ಆಹಾರ ಲಭ್ಯವಾಗುತ್ತಿತ್ತು. ಆದರೆ ಕೃಷ್ಣೆ ಸಂಪೂರ್ಣ ಬತ್ತಿದ್ದರಿಂದ ಮೊಸಳೆಗಳು ಆಹಾರ ಹುಡುಕಿಕೊಂಡು ನದಿ ತೀರದ ತೋಟಪಟ್ಟಿಗಳಿಗೆ ನುಗ್ಗುವ ಭೀತಿಯಲ್ಲಿ ಸ್ಥಳೀಯರಿದ್ದಾರೆ. ಮೊಸಳೆ ಕಾಟದಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಎನ್ನುವ ಚಿಂತೆ ನದಿ ತೀರದ ಗ್ರಾಮಗಳ ಹಾಗೂ ತೋಟದ ವಸತಿ ಪ್ರದೇಶದ ಜನರಲ್ಲಿ ಆವರಿಸಿದೆ.
ಲಕ್ಷಾಂತರ ಮೀನುಗಳು ಸಾವು
ಹಿಪ್ಪರಗಿ ಜಲಾಶಯದ ಕೆಳ ಭಾಗದಲ್ಲಿ 10 ಕಿ.ಮೀವರೆಗೆ ಕೃಷ್ಣಾ ನದಿ ಬತ್ತಿದೆ. ನದಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಾಗವಾಗಿ ದಾಟಿಕೊಂಡು ಹೋಗಬಹುದಾಗಿದೆ. ಅಷ್ಟೇ ಅಲ್ಲದೇ ನದಿ ಮಧ್ಯದಲ್ಲಿರುವ ಬಂಡೆಗಲ್ಲುಗಳು ತೆರೆದುಕೊಂಡಿವೆ. ತಗ್ಗುಗಳಲ್ಲಿಯೂ ಕೂಡ ನೀರು ಇಲ್ಲದಂತಾಗಿದೆ. ನದಿಯಲ್ಲಿ ನೀರು ಬತ್ತಿದ್ದರಿಂದ ಝುಂಜರವಾಡ ಸೇರಿದಂತೆ ವಿವಿಧೆಡೆ ಕೃಷ್ಣಾ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನಿನ ದುರ್ವಾಸೆನೆ ಸುತ್ತ ಮುತ್ತಲಿನ ಪ್ರದೇಶಗಳಿಗೆ ಹರಡಿಕೊಂಡಿದೆ.