<p><strong>ನಿಪ್ಪಾಣಿ:</strong> ತಾಲ್ಲೂಕಿನ ಡೋಣೆವಾಡಿ ಗ್ರಾಮದ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಒಬ್ಬರ ಮೇಲೊಬ್ಬರು ದೂರು ಹೇಳುವುದರಲ್ಲೇ ನಿರತರಾಗಿದ್ದಾರೆ.</p>.<p>ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಅನುಷ್ಕಾ ಭೇಂಡೆ ಎಂಬ ಬಾಲಕಿ ಇನ್ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾದವಳು. ಮುದ್ದು ಮಗುವಿನ ಬಲಿ ಪಡೆದ ಈ ಘಟನಾವಳಿ ವಿವರ ಪಡೆಯಲು ಮುಂದಾದ ‘ಪ್ರಜಾವಾಣಿ’ಗೆ ಅಧಿಕಾರಿಗಳು ಹಾರಿಕೆ ಉತ್ತರಗಳನ್ನೇ ನೀಡಿದರು. ಸೋಮವಾರ ಸಾವು ಸಂಭವಿಸಿದ್ದರೂ ಈವರೆಗೆ ಪಾಲಕರಿಗೆ ಸ್ಪಷ್ಟ ಕಾರಣ ಸಿಕ್ಕಿಲ್ಲ.</p>.<p>ಈ ಶಾಲೆಯ ಕಾಂಪೌಂಡ್ಗೆ ಹೊಂದಿಕೊಂಡು ಬಾಲಕಿಯರ ಶೌಚಾಲಯವಿದೆ. ಮಧ್ಯಾಹ್ನ ಗೆಳತಿಯರೊಂದೊಗೆ ಶೌಚಕ್ಕೆ ಹೋದ ಬಾಲಕಿ ಮರಳಿ ಬರುವಾಗ ಕಾಲು ಜಾರಿದಳು. ಎದುರಿಗೇ ಇದ್ದ ಕಬ್ಬಿಣದ ಟೆಲಿಫೋನ್ ಕಂಬ ತಾಗಿತು. ಈ ಕಂಬ ಹಲವು ವರ್ಷಗಳಿಂದ ವ್ಯರ್ಥವಾಗಿ ಅಲ್ಲಿಯೇ ಇದೆ. ಸದ್ಯ ಅದಕ್ಕೆ ಯಾವುದೇ ಸಂಪರ್ಕ ಇಲ್ಲ. ಶಾಲೆ ಪಕ್ಕದ ಮನೆಗೆ ವಿದ್ಯುತ್ ತಂತಿ ಎಳೆದವರು ಈ ಕಂಬಕ್ಕೆ ಅದನ್ನು ಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಮಳೆಯಾಗಿದ್ದರಿಂದ ಟೆಲಿಫೋನ್ ಕಂಬದಲ್ಲಿ ವಿದ್ಯುತ್ ಹರಿಯುತ್ತಿತ್ತು.</p>.<p>ಗೆಳತಿಯರೊಂದಿಗೆ ನಲಿಯುತ್ತ ಶಾಲೆಗೆ ಕಡೆಗೆ ಓಡುತ್ತಿದ್ದ ಪುಟಾಣಿ ನೋಡನೋಡುತ್ತಿದ್ದಂತೆ ಕುಸಿದುಬಿದ್ದಳು. ವಿದ್ಯುತ್ ಸ್ಪರ್ಶದಿಂದ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಳು. ಇದನ್ನು ಕಂಡು ಶಿಕ್ಷಕರು ಹಾಗೂ ಸುತ್ತಲಿನ ಮನೆಯ ಜನ ವಿದ್ಯುತ್ ಕಡಿತ ಮಾಡಿ, ಇತರ ಮಕ್ಕಳನ್ನು ಸುರಕ್ಷಿತವಾಗಿ ಬೇರೆ ಕಡೆ ಕಳುಹಿಸಿದರು.</p>.<p>ಮನವಿಗೆ ಸ್ಪಂದಿಸದ ಹೆಸ್ಕಾಂ: ‘ಶಾಲೆ ಪಕ್ಕದಲ್ಲಿರುವ ವ್ಯರ್ಥ ಕಂಬಕ್ಕೆ ವಿದ್ಯುತ್ ತಂತಿ ಸುತ್ತಲಾಗಿದ್ದು, ಅದನ್ನು ತೆರವು ಮಾಡುವಂತೆ ಹೆಸ್ಕಾಂನ ಸ್ಥಳೀಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ರೇವತಿ ಮಠದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>ಆದರೆ, ಜೆಸ್ಕಾಂ ಅಧಿಕಾರಿಗಳು ಇದನ್ನು ಒಪ್ಪಲು ತಯಾರಿಲ್ಲ.</p>.<p>‘ಟೆಲಿಫೋನ್ ಕಂಬವಾದ್ದರಿಂದ ನಾವು ತೆರವು ಮಾಡಲು ಬರುವುದಿಲ್ಲ. ಗ್ರಾಹಕರೊಬ್ಬರು ನಮ್ಮ ಗಮನಕ್ಕೆ ತರದೇ ಕಂಬಕ್ಕೆ ವಿದ್ಯುತ್ ತಂತಿ ಸುತ್ತಿದ್ದಾರೆ. ಈ ಬಗ್ಗೆ ಶಾಲೆಯಿಂದ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಹೆಸ್ಕಾಂ ಸದಲಗಾ ವಲಯದ ಸೆಕ್ಷನ್ ಅಧಿಕಾರಿ ಸುರೇಶ ತಹಶೀಲ್ದಾರ್ ಪ್ರತಿಕ್ರಿಯಿಸಿದರು.</p>.<p><strong>ಮುಖ್ಯಶಿಕ್ಷಕ ಅಮಾನತು</strong></p>.<p>ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕ ಕೆ.ವಿ.ನಾಟೇಕರ್ ಅವರನ್ನು ಅಮಾನತುಗೊಳಿಸಲಾಗಿದೆ.</p>.<p>ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ನೀಡುವಂತೆ ನೋಟಿಸ್ನಲ್ಲಿ ಸೂಚಿಸಿದ್ದಾರೆ.</p>.<p><strong>ಪಾಲಕರಿಗೆ ಸಿಗುವುದೇ ಪರಿಹಾರ?</strong></p>.<p>ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾದ ಎಳೆಬಾಲೆಯ ಪಾಲಕರಿಗೆ ಹೆಸ್ಕಾಂನಿಂದ ಪರಿಹಾರ ಸಿಗುವುದೇ ಎಂಬ ಪ್ರಶ್ನೆಗೂ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.</p>.<p>ಇಲಾಖೆ ಮೇಲಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಮಗ್ರ ವರದಿಯನ್ನು ಹೆಸ್ಕಾಂಗೆ ನೀಡಲಾಗಿದೆ. ಗ್ರಾಹಕರಿಗೆ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ ಎಂದಷ್ಟೇ ಅವರು ಹೇಳಿದರು.</p>.<p>ಇತ್ತ, ಆಟವಾಡುತ್ತ ಶಾಲೆಗೆ ಹೋಗಿದ್ದ ಕಂದಮ್ಮನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಹೇಳತೀರದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಪ್ಪಾಣಿ:</strong> ತಾಲ್ಲೂಕಿನ ಡೋಣೆವಾಡಿ ಗ್ರಾಮದ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಒಬ್ಬರ ಮೇಲೊಬ್ಬರು ದೂರು ಹೇಳುವುದರಲ್ಲೇ ನಿರತರಾಗಿದ್ದಾರೆ.</p>.<p>ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಅನುಷ್ಕಾ ಭೇಂಡೆ ಎಂಬ ಬಾಲಕಿ ಇನ್ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾದವಳು. ಮುದ್ದು ಮಗುವಿನ ಬಲಿ ಪಡೆದ ಈ ಘಟನಾವಳಿ ವಿವರ ಪಡೆಯಲು ಮುಂದಾದ ‘ಪ್ರಜಾವಾಣಿ’ಗೆ ಅಧಿಕಾರಿಗಳು ಹಾರಿಕೆ ಉತ್ತರಗಳನ್ನೇ ನೀಡಿದರು. ಸೋಮವಾರ ಸಾವು ಸಂಭವಿಸಿದ್ದರೂ ಈವರೆಗೆ ಪಾಲಕರಿಗೆ ಸ್ಪಷ್ಟ ಕಾರಣ ಸಿಕ್ಕಿಲ್ಲ.</p>.<p>ಈ ಶಾಲೆಯ ಕಾಂಪೌಂಡ್ಗೆ ಹೊಂದಿಕೊಂಡು ಬಾಲಕಿಯರ ಶೌಚಾಲಯವಿದೆ. ಮಧ್ಯಾಹ್ನ ಗೆಳತಿಯರೊಂದೊಗೆ ಶೌಚಕ್ಕೆ ಹೋದ ಬಾಲಕಿ ಮರಳಿ ಬರುವಾಗ ಕಾಲು ಜಾರಿದಳು. ಎದುರಿಗೇ ಇದ್ದ ಕಬ್ಬಿಣದ ಟೆಲಿಫೋನ್ ಕಂಬ ತಾಗಿತು. ಈ ಕಂಬ ಹಲವು ವರ್ಷಗಳಿಂದ ವ್ಯರ್ಥವಾಗಿ ಅಲ್ಲಿಯೇ ಇದೆ. ಸದ್ಯ ಅದಕ್ಕೆ ಯಾವುದೇ ಸಂಪರ್ಕ ಇಲ್ಲ. ಶಾಲೆ ಪಕ್ಕದ ಮನೆಗೆ ವಿದ್ಯುತ್ ತಂತಿ ಎಳೆದವರು ಈ ಕಂಬಕ್ಕೆ ಅದನ್ನು ಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಮಳೆಯಾಗಿದ್ದರಿಂದ ಟೆಲಿಫೋನ್ ಕಂಬದಲ್ಲಿ ವಿದ್ಯುತ್ ಹರಿಯುತ್ತಿತ್ತು.</p>.<p>ಗೆಳತಿಯರೊಂದಿಗೆ ನಲಿಯುತ್ತ ಶಾಲೆಗೆ ಕಡೆಗೆ ಓಡುತ್ತಿದ್ದ ಪುಟಾಣಿ ನೋಡನೋಡುತ್ತಿದ್ದಂತೆ ಕುಸಿದುಬಿದ್ದಳು. ವಿದ್ಯುತ್ ಸ್ಪರ್ಶದಿಂದ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಳು. ಇದನ್ನು ಕಂಡು ಶಿಕ್ಷಕರು ಹಾಗೂ ಸುತ್ತಲಿನ ಮನೆಯ ಜನ ವಿದ್ಯುತ್ ಕಡಿತ ಮಾಡಿ, ಇತರ ಮಕ್ಕಳನ್ನು ಸುರಕ್ಷಿತವಾಗಿ ಬೇರೆ ಕಡೆ ಕಳುಹಿಸಿದರು.</p>.<p>ಮನವಿಗೆ ಸ್ಪಂದಿಸದ ಹೆಸ್ಕಾಂ: ‘ಶಾಲೆ ಪಕ್ಕದಲ್ಲಿರುವ ವ್ಯರ್ಥ ಕಂಬಕ್ಕೆ ವಿದ್ಯುತ್ ತಂತಿ ಸುತ್ತಲಾಗಿದ್ದು, ಅದನ್ನು ತೆರವು ಮಾಡುವಂತೆ ಹೆಸ್ಕಾಂನ ಸ್ಥಳೀಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ರೇವತಿ ಮಠದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>ಆದರೆ, ಜೆಸ್ಕಾಂ ಅಧಿಕಾರಿಗಳು ಇದನ್ನು ಒಪ್ಪಲು ತಯಾರಿಲ್ಲ.</p>.<p>‘ಟೆಲಿಫೋನ್ ಕಂಬವಾದ್ದರಿಂದ ನಾವು ತೆರವು ಮಾಡಲು ಬರುವುದಿಲ್ಲ. ಗ್ರಾಹಕರೊಬ್ಬರು ನಮ್ಮ ಗಮನಕ್ಕೆ ತರದೇ ಕಂಬಕ್ಕೆ ವಿದ್ಯುತ್ ತಂತಿ ಸುತ್ತಿದ್ದಾರೆ. ಈ ಬಗ್ಗೆ ಶಾಲೆಯಿಂದ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಹೆಸ್ಕಾಂ ಸದಲಗಾ ವಲಯದ ಸೆಕ್ಷನ್ ಅಧಿಕಾರಿ ಸುರೇಶ ತಹಶೀಲ್ದಾರ್ ಪ್ರತಿಕ್ರಿಯಿಸಿದರು.</p>.<p><strong>ಮುಖ್ಯಶಿಕ್ಷಕ ಅಮಾನತು</strong></p>.<p>ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕ ಕೆ.ವಿ.ನಾಟೇಕರ್ ಅವರನ್ನು ಅಮಾನತುಗೊಳಿಸಲಾಗಿದೆ.</p>.<p>ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ನೀಡುವಂತೆ ನೋಟಿಸ್ನಲ್ಲಿ ಸೂಚಿಸಿದ್ದಾರೆ.</p>.<p><strong>ಪಾಲಕರಿಗೆ ಸಿಗುವುದೇ ಪರಿಹಾರ?</strong></p>.<p>ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾದ ಎಳೆಬಾಲೆಯ ಪಾಲಕರಿಗೆ ಹೆಸ್ಕಾಂನಿಂದ ಪರಿಹಾರ ಸಿಗುವುದೇ ಎಂಬ ಪ್ರಶ್ನೆಗೂ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.</p>.<p>ಇಲಾಖೆ ಮೇಲಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಮಗ್ರ ವರದಿಯನ್ನು ಹೆಸ್ಕಾಂಗೆ ನೀಡಲಾಗಿದೆ. ಗ್ರಾಹಕರಿಗೆ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ ಎಂದಷ್ಟೇ ಅವರು ಹೇಳಿದರು.</p>.<p>ಇತ್ತ, ಆಟವಾಡುತ್ತ ಶಾಲೆಗೆ ಹೋಗಿದ್ದ ಕಂದಮ್ಮನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಹೇಳತೀರದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>