ಸೋಮವಾರ, 10 ನವೆಂಬರ್ 2025
×
ADVERTISEMENT
ADVERTISEMENT

ಕಡಿಮೆಯಾಗುತ್ತಿದೆ ಅರಣ್ಯ: ಕಾಡು ಆನೆಗಳಿಗೂ ಬೇಕಿದೆ ‘ಮೊಗಾಸಾಲೆ’

Published : 10 ನವೆಂಬರ್ 2025, 2:20 IST
Last Updated : 10 ನವೆಂಬರ್ 2025, 2:20 IST
ಫಾಲೋ ಮಾಡಿ
Comments
ಖಾನಾಪುರ ತಾಲ್ಲೂಕು ಮಾಚಾಳಿ ಭಾಗದ ಭತ್ತದ ಗದ್ದೆಯಲ್ಲಿ ಮಹಾರಾಷ್ಟ್ರದ ಆನೆ (ಸಂಗ್ರಹ ಚಿತ್ರ
ಖಾನಾಪುರ ತಾಲ್ಲೂಕು ಮಾಚಾಳಿ ಭಾಗದ ಭತ್ತದ ಗದ್ದೆಯಲ್ಲಿ ಮಹಾರಾಷ್ಟ್ರದ ಆನೆ (ಸಂಗ್ರಹ ಚಿತ್ರ
ಕಾಡಾನೆಯೊಂದು ಖಾನಾಪುರ ತಾಲ್ಲೂಕು ಘಷ್ಟೊಳ್ಳಿ ಭಾಗದ ಕೃಷಿ ಜಮೀನುಗಳಲ್ಲಿ ಸಂಚರಿಸಿದ ಆನೆ
ಕಾಡಾನೆಯೊಂದು ಖಾನಾಪುರ ತಾಲ್ಲೂಕು ಘಷ್ಟೊಳ್ಳಿ ಭಾಗದ ಕೃಷಿ ಜಮೀನುಗಳಲ್ಲಿ ಸಂಚರಿಸಿದ ಆನೆ
ಸುಳ್ಳೇಗಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಲಾಖೆಯ ನಿಯಮಗಳ ಪ್ರಕಾರ ಅವುಗಳ ಅಂತ್ಯಕ್ರಿಯೆ ಮಾಡಲಾಗಿದೆ. ಭವಿಷ್ಯದಲ್ಲಿ ಕಾಡಾನೆಗಳ ಜೀವ ರಕ್ಷಣೆಗಾಗಿ ಇಲಾಖೆಯಿಂದ ಅಗತ್ಯ ಕ್ರಮ ಜರುಗಿಸಲಾಗುತ್ತದೆ.
ಶಿವಾನಂದ ಮಗದುಮ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ವಿದ್ಯುತ್ ಸ್ಪರ್ಶದಿಂದ ಆನೆಗಳ ಅಸ್ವಾಭಾವಿಕ ಸಾವಿನ ಪ್ರಕರಣಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಳೀಯರ ಜತೆ ಸಭೆ ನಡೆಸಿ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಲಿಖಿತ ಸೂಚನೆ ನೀಡಿದ ನಂತರವೂ ಇಂಥ ಘಟನೆ ನಡೆದಿರುವುದು ದುರದೃಷ್ಟಕರ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗಬೇಕು.
ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ
ಆನೆಗಳ ಸಾವಿನ ಪ್ರಕರಣದಲ್ಲಿ ಅರಣ್ಯ ಇಲಾಖೆ ತನ್ನ ತಪ್ಪು ಮುಚ್ಚಿ ಹಾಕಲು ಯತ್ನಿಸಿದೆ. ಈ ಸಾವಿಗೆ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಕಾಂಗ್ರೆಸ್‌ ತೀವ್ರ ಹೋರಾಟ ಮಾಡಲಿದೆ.
ಈಶ್ವರ ಘಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ
ವರ್ಷದಿಂದ ವರ್ಷಕ್ಕೆ ಕಾಡು ಕಡಿಮೆ ಆಗು‌ತ್ತಿದೆ. ಅಲ್ಲಿ ಆಹಾರ ನೀರು ಸಿಗದ ಕಾರಣ ಪ್ರಾಣಿಗಳು ಹೊರಗೆ ಬರುತ್ತಿವೆ. ಮಾನವರು ಕಾಡಿಗೆ ದಾಳಿ ಮಾಡುತ್ತಿರುವುದೇ ಕಾಡುಮೃಗಗಳು ನಾಡಿಗೆ ದಾಳಿ ಮಾಡುತ್ತಿವೆ. ಎರಡೂ ಕಡೆಯ ದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ.
ವಿಲಾಸ ತೋಟಗೇರ ಕೃಷಿಕ
ದಾಂಡೇಲಿ ಅರಣ್ಯದಿಂದ ಪ್ರತಿವರ್ಷ ಅಕ್ಟೋಬರ್‌ನಲ್ಲಿ ಖಾನಾಪುರ ತಾಲ್ಲೂಕಿಗೆ ಕಾಡಾನೆಗಳ ಹಿಂಡು ಬರುತ್ತದೆ. ಕೃಷಿ ಜಮೀನುಗಳಲ್ಲಿ ಕಾಡಾನೆಗಳು ಸಂಚರಿಸಿ ನಾವು ಕಷ್ಟಪಟ್ಟು ಬೆಳೆಸಿದ ಕಬ್ಬು ಭತ್ತದ ಬೆಳೆ ತಿಂದು ತುಳಿದು ಹಾಳು ಮಾಡುತ್ತವೆ. ಕಾಡಾನೆಗಳ ಜತೆಗೆ ಮರಿಯಾನೆಗಳು ಇದ್ದಾಗ ನಮ್ಮ ಮೇಲೆ ದಾಳಿ ಮಾಡುತ್ತವೆ. ಸಣ್ಣ ಪ್ರಮಾಣದ ಬೆಳೆ ಹಾನಿಯಾದಾಗ ನಾವು ತಲೆ‌ ಅಷ್ಟಾಗಿ ಕೆಡಿಸಿಕೊಳ್ಳುವುದಿಲ್ಲ. ಆದರೆ ಎಕರೆಗಳಷ್ಟು ಬೆಳೆ ಹಾನಿಯಾದಾಗ ಅರಣ್ಯ ಇಲಾಖೆ ಗಮನ ಸೆಳೆಯುತ್ತೇವೆ. ಈ ವರ್ಷವೂ ಆನೆಗಳು ಬಂದು ಬಹಳಷ್ಟು ಬೆಳೆ ಹಾನಿ ಮಾಡಿಹೋಗಿವೆ.
ಜ್ಯೋತಿಬಾ ಭೆಂಡಿಗೇರಿ ರೈತ ಮಾಸ್ಕೇನಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT