<p><strong>ಧಾರವಾಡ</strong>: ಧಾರವಾಡದ ಅಮರ್ ಧರೆಣ್ಣವರ್ ಇಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯಮಟ್ಟದ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.</p>.<p>ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್ನಿಂದ ನಗರದ ರಾಜಾಧ್ಯಕ್ಷ ಪೆವಿಲಿಯನ್ ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಮರ್ ಧರೆಣ್ಣವರ್ 8-2ರಿಂದ ಬೆಂಗಳೂರಿನ ವೇದಾಂಶ್ ಅವರನ್ನು ಮಣಿಸಿದರು. </p>.<p>ಡಬಲ್ಸ್ ವಿಭಾಗದಲ್ಲಿ ಅಮರ್ ಧರೆಣ್ಣವರ್ ಹಾಗೂ ದಾವಣಗೆರೆಯ ಬಸವರಾಜ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಅಮರ್ ಮತ್ತು ಬಸವರಾಜ 8–0ರಿಂದ ಧಾರವಾಡದ ಸಚಿನ್ ಕ್ಯಾರೆ ಹಾಗೂ ಶಿವರಾಜ ಪಾಟೀಲ ಅವರನ್ನು ಸೋಲಿಸಿದರು.</p>.<p><span class="bold"><strong>70+ ವಯಸ್ಸಿನವರು</strong></span>: ಧಾರವಾಡದ ಅರವಿಂದ್ ಯೆರಿ ಮತ್ತು ಆನಂದ್ ಯೆರಿ 6–3ರಿಂದ ಗದಗಿನ ಗಂಗಾಧರ್ ಥಡಿ ಮತ್ತು ಬಳ್ಳಾರಿಯ ಜೋಸೆಫ್ ಅವರನ್ನು ಮಣಿಸಿದರು.</p>.<p><span class="bold"><strong>65+ ವಯಸ್ಸಿನವರು:</strong> </span>ಅರವಿಂದ್ ಯೆರಿ ಮತ್ತು ನಾಗರಾಜ ಅಂಬ್ಲಿ 6–1ರಿಂದ ಬೈಲಹೊಂಗಲದ ಚಂದ್ರಕಾಂತ ಹೊಸಮಠ ಹಾಗೂ ವಿಜಯಪುರದ ಶಶಿಧರ ಕಲಮಡಿ ಜೋಡಿಯನ್ನು ಸೋಲಿಸಿದರು.</p>.<p><span class="bold"><strong>55+ ವಯಸ್ಸಿನವರು:</strong></span> ಮೈಸೂರಿನ ಡಿ.ರವೀಂದ್ರ ಮತ್ತು ಭವರ್ಲಾಲ್ ಜೋಡಿಯು 7–5ರಿಂಂದ ಬಾಗಲಕೋಟೆಯ ಉಜ್ವಲ್ ಸಕ್ರಿ ಮತ್ತು ರಾಘವೇಂದ್ರ ಜೋಡಿ ಎದುರು ಜಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಧಾರವಾಡದ ಅಮರ್ ಧರೆಣ್ಣವರ್ ಇಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯಮಟ್ಟದ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.</p>.<p>ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್ನಿಂದ ನಗರದ ರಾಜಾಧ್ಯಕ್ಷ ಪೆವಿಲಿಯನ್ ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಮರ್ ಧರೆಣ್ಣವರ್ 8-2ರಿಂದ ಬೆಂಗಳೂರಿನ ವೇದಾಂಶ್ ಅವರನ್ನು ಮಣಿಸಿದರು. </p>.<p>ಡಬಲ್ಸ್ ವಿಭಾಗದಲ್ಲಿ ಅಮರ್ ಧರೆಣ್ಣವರ್ ಹಾಗೂ ದಾವಣಗೆರೆಯ ಬಸವರಾಜ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಅಮರ್ ಮತ್ತು ಬಸವರಾಜ 8–0ರಿಂದ ಧಾರವಾಡದ ಸಚಿನ್ ಕ್ಯಾರೆ ಹಾಗೂ ಶಿವರಾಜ ಪಾಟೀಲ ಅವರನ್ನು ಸೋಲಿಸಿದರು.</p>.<p><span class="bold"><strong>70+ ವಯಸ್ಸಿನವರು</strong></span>: ಧಾರವಾಡದ ಅರವಿಂದ್ ಯೆರಿ ಮತ್ತು ಆನಂದ್ ಯೆರಿ 6–3ರಿಂದ ಗದಗಿನ ಗಂಗಾಧರ್ ಥಡಿ ಮತ್ತು ಬಳ್ಳಾರಿಯ ಜೋಸೆಫ್ ಅವರನ್ನು ಮಣಿಸಿದರು.</p>.<p><span class="bold"><strong>65+ ವಯಸ್ಸಿನವರು:</strong> </span>ಅರವಿಂದ್ ಯೆರಿ ಮತ್ತು ನಾಗರಾಜ ಅಂಬ್ಲಿ 6–1ರಿಂದ ಬೈಲಹೊಂಗಲದ ಚಂದ್ರಕಾಂತ ಹೊಸಮಠ ಹಾಗೂ ವಿಜಯಪುರದ ಶಶಿಧರ ಕಲಮಡಿ ಜೋಡಿಯನ್ನು ಸೋಲಿಸಿದರು.</p>.<p><span class="bold"><strong>55+ ವಯಸ್ಸಿನವರು:</strong></span> ಮೈಸೂರಿನ ಡಿ.ರವೀಂದ್ರ ಮತ್ತು ಭವರ್ಲಾಲ್ ಜೋಡಿಯು 7–5ರಿಂಂದ ಬಾಗಲಕೋಟೆಯ ಉಜ್ವಲ್ ಸಕ್ರಿ ಮತ್ತು ರಾಘವೇಂದ್ರ ಜೋಡಿ ಎದುರು ಜಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>