ಮುಖ್ಯಮಂತ್ರಿ ಬರುವ ವಿಷಯ ತಿಳಿದು ಬಂದಿದ್ದ ಅವರು, ‘ಅಕಾಲಿಕ ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆಗೆ ಕೂಡಲೇ ಸಮರ್ಪಕವಾಗಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ಮನವಿ ನೀಡಲು ಯೋಜಿಸಿದ್ದರು. ಆದರೆ, ಪೊಲೀಸರು ಅವರಿಗೆ ಅವಕಾಶ ಕೊಡಲಿಲಿಲ್ಲ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ರೈತರ ಕಷ್ಟ ಕೇಳದಿದ್ದರೆ ಇವರೆಂತಹ ಮುಖ್ಯಮಂತ್ರಿ’ ಎಂದೂ ಅವರು ಕೇಳಿದರು.