ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಕ್ಕೇರಿ | ಶೇ 67.54 ಮತದಾನ; ಫಲಿತಾಂಶಕ್ಕೆ ಕಾತರ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಶಾಂತ, ಬಿಗಿ ಪೊಲೀಸ್‌ ಬಂದೋಬಸ್ತ್‌
Published : 29 ಸೆಪ್ಟೆಂಬರ್ 2025, 4:46 IST
Last Updated : 29 ಸೆಪ್ಟೆಂಬರ್ 2025, 4:46 IST
ಫಾಲೋ ಮಾಡಿ
Comments
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಅಭ್ಯರ್ಥಿ ಪ್ರಥ್ವಿ ಕತ್ತಿ (ರಮೇಶ ಕತ್ತಿ ಪುತ್ರ) ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಅಭ್ಯರ್ಥಿ ಪ್ರಥ್ವಿ ಕತ್ತಿ (ರಮೇಶ ಕತ್ತಿ ಪುತ್ರ) ಮತದಾನ ಕೇಂದ್ರದ ಆವರಣದಲ್ಲಿ ಪ್ರಕ್ರಿಯೆ ವೀಕ್ಷಿಸಿದರು
ಸಹಕಾರ ಸಂಘದಲ್ಲಿ ರಾಜಕೀಯ ಜಿದ್ದಾಜಿದ್ದಿ
ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದಲ್ಲಿ ಈ ಬಾರಿ ರಾಜಕೀಯ ಜಿದ್ದಾಜಿದ್ದಿ ಹೆಚ್ಚಾಗಿದೆ. ಹಲವು ವರ್ಷಗಳಿಂದ ರಮೇಶ ಕತ್ತಿ ಹಾಗೂ ಅವರ ಕುಟುಂಬದ ನೇತೃತ್ವದಲ್ಲೇ ನಡೆಯುತ್ತಿದ್ದ ಈ ಸಂಘಕ್ಕೆ ಇದೇ ಮೊದಲ ಬಾರಿಗೆ ಜಾರಕಿಹೊಳಿ ಹಾಗೂ ಜೊಲ್ಲೆ ಕುಟುಂಬದವರು ಪ್ರವೇಶ ಕೊಟ್ಟಿದ್ದಾರೆ. ಬಿಡಿಸಿಸಿ ಬ್ಯಾಂಕಿನಲ್ಲಿ ಭುಗಿಲೆದ್ದ ಈ ಮೇಲಾಟ ಸಹಾಕರ ಸಂಘಕ್ಕೂ ವ್ಯಾಪಿಸಿದೆ. ಕಳೆದೊಂದು ತಿಂಗಳಿಂದ ಸಚಿವ ಸತೀಶ ಜಾರಕಿಹೊಳಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹುಕ್ಕೇರಿ ತಾಲ್ಲೂಕಿನಲ್ಲೇ ಠಿಕಾಣೆ ಹೂಡಿದ್ದಾರೆ. ತಾವ್ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸೆಡ್ಡು ಹೊಡೆದ ಮಾಜಿ ಸಂಸದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ರಮೇಶ ಕತ್ತಿ ಶಾಸಕ ನಿಖಿಲ್‌ ಕತ್ತಿ ಸೇರಿದಂತೆ ಇಡೀ ಕತ್ತಿ ಪರಿವಾರವೂ ಇದಕ್ಕೆ ಸನ್ನದ್ಧವಾಗಿದೆ. ಅಷ್ಟರಮಟ್ಟಿಗೆ ಬಿಡಿಸಿಸಿ ಚುನಾವಣೆ ಹಾಗೂ ವಿದ್ಯುತ್ ಸಂಘದ ಚುನಾವಣೆಗಳೂ ರಾಜ್ಯದ ಗಮನ ಸೆಳೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT