ಅಥಣಿ: ಅಗ್ರಾಣಿ ನದಿ ದಡದಲ್ಲಿ ಅಥಣಿ ಹಾಗೂ ಕಾಗವಾಡ ತಾಲ್ಲೂಕಿನಲ್ಲಿ ಅಕ್ರಮವಾಗಿ ಮರಗಳು ಸಾಗಿಸುತ್ತಿದ್ದವರಿಗೆ ಡಿಸಿಐಬಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಮರಳು ತುಂಬುತ್ತಿದ್ದ 5 ಲಾರಿಗಳನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪಾಂಡುರಂಗ ಕಂಟಿಕರ್, ಕುಮಾರ ಬರಲಿ, ಸುಖದೇವ ಮಾನೆ, ಗೌಡಪ್ಪ ಪೂಜಾರಿ ಎನ್ನುವವರಿಗೆ ಸೇರಿದ ವಾಹನ ಇವಾಗಿವೆ.
ಅಕ್ರಮವಾಗಿ ಮರಗಳು ಸಾಗಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವಾಗಿತ್ತು.