‘ಓಲೈಕೆ ಇರುವವರೆಗೂ ಈ ರೀತಿ ಘಟನೆ’
‘ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮುಸ್ಲಿಂ ಸಮುದಾಯದವರು ಕಲ್ಲುತೂರಾಟ ನಡೆಸಿದ ಘಟನೆ ನಡೆದಿರುವುದು ಇದೇ ಮೊದಲಲ್ಲ, ಕೊನೇ ಅಲ್ಲ. ಕೆಲವರ ಮಾನಸಿಕತೆ ಬದಲಾಗುವವರೆಗೂ ಈ ರೀತಿಯ ಘಟನೆ ನಡೆಯುತ್ತವೆ. ಕಾಂಗ್ರೆಸ್ನವರು ಮಾಡುತ್ತಿರುವ ಮುಸ್ಲಿಮರ ಓಲೈಕೆಯೇ ಇದಕ್ಕೆ ಕಾರಣ. ಇಂಥ ಕೃತ್ಯ ಕೈಗೊಳ್ಳುವವರಿಗೆ ಹಿಂದೂ ಸಮಾಜ ಉತ್ತರ ಕೊಡುತ್ತದೆ’ ಎಂದು ಪ್ರಮೋದ ಮುತಾಲಿಕ ಹೇಳಿದರು.
‘ಇಂದು ಮದರಸಾದಲ್ಲಿ ವಿಷ ತುಂಬುವ ಕೆಲಸವಾಗುತ್ತಿದೆ. ಪೊಲೀಸರು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೇ ಹೊರತು, ರಾಜಕೀಯ ನಾಯಕರ ಅನತಿಯಂತೆ ಕೆಲಸ ಮಾಡಬಾರದು. ದೇಶದ್ರೋಹದ ಕೆಲಸವನ್ನು ಪೊಲೀಸರು ಮಾಡಬಾರದು’ ಎಂದರು.