<p><strong>ಬೆಳಗಾವಿ:</strong> ರಾಜ್ಯದ 5,000 ಅಂಗನವಾಡಿ ಕೇಂದ್ರಗಳಲ್ಲಿ ಇದೇ ನವೆಂಬರ್ ತಿಂಗಳಿಂದ ಮಾಂಟೆಸ್ಸರಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಆರಂಭಿಸಿದ್ದ ಮಾಂಟೆಸ್ಸರಿಗೆ ಸಿಕ್ಕ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. </p>.<p>ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಆರಂಭಿಸಿ, 2,550 ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿತ್ತು.ಈಗ ಮಕ್ಕಳ ಸಂಖ್ಯೆ 3,950ಕ್ಕೆ ಏರಿದೆ. </p>.<p>ಸರ್ಕಾರಿ ಮಾಂಟೆಸ್ಸರಿಗೆ (ಎಲ್ಕೆಜಿ, ಯುಕೆಜಿ ತರಗತಿಗೆ) ಸಿಕ್ಕ ಸ್ಪಂದನ ಆಧರಿಸಿ ರಾಜ್ಯವ್ಯಾಪಿ ಯೋಜನೆ ವಿಸ್ತರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ. </p>.<p>ರಾಜ್ಯದಲ್ಲಿ ಒಟ್ಟು 69,922 ಅಂಗನವಾಡಿ ಕೇಂದ್ರಗಳಿವೆ. 3 ರಿಂದ 6 ವರ್ಷದ 16 ಲಕ್ಷ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. </p>.<p>‘ನವೆಂಬರ್ ತಿಂಗಳಿಂದ 5 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಆರಂಭಕ್ಕೆ ತಯಾರಿ ನಡೆದಿದೆ. ಕಟ್ಟಡ ಸೇರಿ ಅಗತ್ಯ ಮೂಲಸೌಲಭ್ಯ ಸಿಕ್ಕರೆ, 7 ಸಾವಿರ ಮಾಂಟೆಸ್ಸರಿ ಆರಂಭಿಸುವ ಚಿಂತನೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.</p>.<p>ಈಗ ಪ್ರತಿ ಜಿಲ್ಲೆಯಲ್ಲಿ ಮಾಂಟೆಸ್ಸರಿಗಳ ಆರಂಭಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕ್ರಮ ವಹಿಸಿದ್ದಾರೆ. ಅವುಗಳಿಗೆ ಪೂರೈಸಲು ಕಲಿಕಾ ಸಾಮಗ್ರಿ ಸಿದ್ಧವಾಗಿವೆ. ಸಕ್ಷಮ್ ಯೋಜನೆಯಡಿ ಎಲ್ಇಡಿ ಟಿ.ವಿಗಳನ್ನು ಒದಗಿಸಲಾಗಿದೆ.</p>.<p>ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಚಿಣ್ಣರಿಗೆ ಶಿಕ್ಷಣ ನೀಡಲು ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರಕ ತರಬೇತಿಯನ್ನು ನೀಡಲಾಗುತ್ತಿದೆ.</p>.<p>‘ಪಟ್ಟಣ, ಗ್ರಾಮಗಳ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಇವು ಆರಂಭವಾದರೆ 1 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಎಲ್ಕೆಜಿ, ಯುಕೆಜಿ ಶಿಕ್ಷಣ ಸಿಗಲಿದೆ. ಜತೆಗೆ ದಾಖಲಾತಿ ಪ್ರಮಾಣವೂ ಹೆಚ್ಚಲಿದೆ. ಹೆಚ್ಚಿನ ಶುಲ್ಕವುಳ್ಳ ಖಾಸಗಿ ನರ್ಸರಿ<br>ಗಳತ್ತ ಬಡ ಕುಟುಂಬಗಳು ಮುಖ ಮಾಡುವುದು ತಪ್ಪುತ್ತದೆ’ ಎಂದು ಮೂಲಗಳು ತಿಳಿಸಿವೆ.</p>.<div><blockquote>ರಾಜ್ಯದಲ್ಲಿ ಅಂಗನವಾಡಿ ಕೇಂದ್ರ ಆರಂಭವಾಗಿ 50 ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಆಧುನೀಕರಣಗೊಳಿಸಿ 5 ಸಾವಿರ ಮಾಂಟೆಸ್ಸರಿಗಳಿಗೆ ಚಾಲನೆ ಕೊಡುತ್ತೇವೆ</blockquote><span class="attribution">ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ</span></div>.<div><blockquote>ಬೆಳಗಾವಿ ಜಿಲ್ಲೆಯಲ್ಲಿ 750 ಸರ್ಕಾರಿ ಮಾಂಟೆಸ್ಸರಿಗಳ ಆರಂಭಕ್ಕೆ ಅಂಗನವಾಡಿ ಕೇಂದ್ರ ಗುರುತಿಸಿದ್ದೇವೆ. ಮಕ್ಕಳಿಗೆ ಪಾಠ ಮಾಡಲು ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗುತ್ತಿದೆ.</blockquote><span class="attribution">ಎಂ.ಎನ್.ಚೇತನಕುಮಾರ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ರಾಜ್ಯದ 5,000 ಅಂಗನವಾಡಿ ಕೇಂದ್ರಗಳಲ್ಲಿ ಇದೇ ನವೆಂಬರ್ ತಿಂಗಳಿಂದ ಮಾಂಟೆಸ್ಸರಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಆರಂಭಿಸಿದ್ದ ಮಾಂಟೆಸ್ಸರಿಗೆ ಸಿಕ್ಕ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. </p>.<p>ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಆರಂಭಿಸಿ, 2,550 ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿತ್ತು.ಈಗ ಮಕ್ಕಳ ಸಂಖ್ಯೆ 3,950ಕ್ಕೆ ಏರಿದೆ. </p>.<p>ಸರ್ಕಾರಿ ಮಾಂಟೆಸ್ಸರಿಗೆ (ಎಲ್ಕೆಜಿ, ಯುಕೆಜಿ ತರಗತಿಗೆ) ಸಿಕ್ಕ ಸ್ಪಂದನ ಆಧರಿಸಿ ರಾಜ್ಯವ್ಯಾಪಿ ಯೋಜನೆ ವಿಸ್ತರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ. </p>.<p>ರಾಜ್ಯದಲ್ಲಿ ಒಟ್ಟು 69,922 ಅಂಗನವಾಡಿ ಕೇಂದ್ರಗಳಿವೆ. 3 ರಿಂದ 6 ವರ್ಷದ 16 ಲಕ್ಷ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. </p>.<p>‘ನವೆಂಬರ್ ತಿಂಗಳಿಂದ 5 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಆರಂಭಕ್ಕೆ ತಯಾರಿ ನಡೆದಿದೆ. ಕಟ್ಟಡ ಸೇರಿ ಅಗತ್ಯ ಮೂಲಸೌಲಭ್ಯ ಸಿಕ್ಕರೆ, 7 ಸಾವಿರ ಮಾಂಟೆಸ್ಸರಿ ಆರಂಭಿಸುವ ಚಿಂತನೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.</p>.<p>ಈಗ ಪ್ರತಿ ಜಿಲ್ಲೆಯಲ್ಲಿ ಮಾಂಟೆಸ್ಸರಿಗಳ ಆರಂಭಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕ್ರಮ ವಹಿಸಿದ್ದಾರೆ. ಅವುಗಳಿಗೆ ಪೂರೈಸಲು ಕಲಿಕಾ ಸಾಮಗ್ರಿ ಸಿದ್ಧವಾಗಿವೆ. ಸಕ್ಷಮ್ ಯೋಜನೆಯಡಿ ಎಲ್ಇಡಿ ಟಿ.ವಿಗಳನ್ನು ಒದಗಿಸಲಾಗಿದೆ.</p>.<p>ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಚಿಣ್ಣರಿಗೆ ಶಿಕ್ಷಣ ನೀಡಲು ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರಕ ತರಬೇತಿಯನ್ನು ನೀಡಲಾಗುತ್ತಿದೆ.</p>.<p>‘ಪಟ್ಟಣ, ಗ್ರಾಮಗಳ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಇವು ಆರಂಭವಾದರೆ 1 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಎಲ್ಕೆಜಿ, ಯುಕೆಜಿ ಶಿಕ್ಷಣ ಸಿಗಲಿದೆ. ಜತೆಗೆ ದಾಖಲಾತಿ ಪ್ರಮಾಣವೂ ಹೆಚ್ಚಲಿದೆ. ಹೆಚ್ಚಿನ ಶುಲ್ಕವುಳ್ಳ ಖಾಸಗಿ ನರ್ಸರಿ<br>ಗಳತ್ತ ಬಡ ಕುಟುಂಬಗಳು ಮುಖ ಮಾಡುವುದು ತಪ್ಪುತ್ತದೆ’ ಎಂದು ಮೂಲಗಳು ತಿಳಿಸಿವೆ.</p>.<div><blockquote>ರಾಜ್ಯದಲ್ಲಿ ಅಂಗನವಾಡಿ ಕೇಂದ್ರ ಆರಂಭವಾಗಿ 50 ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಆಧುನೀಕರಣಗೊಳಿಸಿ 5 ಸಾವಿರ ಮಾಂಟೆಸ್ಸರಿಗಳಿಗೆ ಚಾಲನೆ ಕೊಡುತ್ತೇವೆ</blockquote><span class="attribution">ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ</span></div>.<div><blockquote>ಬೆಳಗಾವಿ ಜಿಲ್ಲೆಯಲ್ಲಿ 750 ಸರ್ಕಾರಿ ಮಾಂಟೆಸ್ಸರಿಗಳ ಆರಂಭಕ್ಕೆ ಅಂಗನವಾಡಿ ಕೇಂದ್ರ ಗುರುತಿಸಿದ್ದೇವೆ. ಮಕ್ಕಳಿಗೆ ಪಾಠ ಮಾಡಲು ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗುತ್ತಿದೆ.</blockquote><span class="attribution">ಎಂ.ಎನ್.ಚೇತನಕುಮಾರ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>