‘ಸಿದ್ಧಾಂತದ ತಳಹದಿಯಲ್ಲಿ ನಾನು ರಾಜಕಾರಣ ಮಾಡಿದ್ದೇನೆ. ಜನರು, ಸಮಾಜದ ಪರವಾಗಿ ಹೋರಾಡಿದ್ದೇನೆ. ಜಾತಿ, ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇನೆ. ಇದನ್ನು ಅವರು ಮುಂದುವರಿಸಬೇಕು. ಈ ನಿಟ್ಟಿನಲ್ಲಿ ತರಬೇತಿ ನೀಡುತ್ತಿದ್ದೇನೆ. ಅವರಿಗೆ ನೇರವಾಗಿ ರಾಜಕೀಯಕ್ಕೆ ಪ್ರವೇಶಿಸಲು ಬಿಟ್ಟಿಲ್ಲ. ಬೇರೆ ರಾಜಕಾರಣಿಗಳು, ಶಾಸಕರು ಹಾಗೂ ಸಚಿವರು ಮಕ್ಕಳು ಅಧಿಕಾರದಲ್ಲಿಲ್ಲದಿದ್ದರೂ ವ್ಯವಸ್ಥೆ ನಿಯಂತ್ರಿಸುತ್ತಿದ್ದಾರೆ. ಆದರೆ, ನನ್ನ ಮಕ್ಕಳ ವಿಷಯದಲ್ಲಿ ಹೀಗಾಗದಂತೆ ನೋಡಿಕೊಂಡಿದ್ದೇನೆ. ಈಗ ರಾಜಕೀಯೇತರ ಕಾರ್ಯಕ್ರಮಗಳಲ್ಲಿ ಮಾತ್ರವೇ ಅವರು ಭಾಗವಹಿಸುತ್ತಿದ್ದಾರೆ. ಇನ್ನೂ ಅವರಿಗೆ ಅನುಭವ ಬೇಕಾಗಿದೆ. ಆದರೆ, ನಾವು ಪಟ್ಟಷ್ಟು ಕಷ್ಟ ಅವರಿಗೆ ಆಗುವುದಿಲ್ಲ’ ಎಂದರು.