ಹಿಂದವಾಡಿ ಗುಮ್ಮಟಮಾಳದ ಸಚಿನ್ ನಾರಾಯಣ ಬಾಂಡಿವಾಡೇಕರ್ ಈ ಬಗ್ಗೆ ದೂರು ನೀಡಿದ್ದರು. ‘ಜೂನ್ 27ರಂದು ಸಂಜೆ 6.30ಕ್ಕೆ ಹಿಂಡಲಗಾ ರಸ್ತೆಯ ಚಿನ್ನಾಭರಣ ಅಂಗಡಿಗೆ ಬಂದ ಆರೋಪಿಯು ನಕ್ಲೆಸ್ಗಳನ್ನು ಖರೀದಿಸುವುದಾಗಿ ತಿಳಿಸಿ ವೀಕ್ಷಿಸಿದರು. ಒಂದಾದ ನಂತರ ಮತ್ತೊಂದು ಕೇಳಿದರು. ಒಟ್ಟು 4 ನಕ್ಲೆಸ್ಗಳನ್ನು ಜೇಬಿನಲ್ಲಿ ಹಾಕಿಕೊಂಡು, ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿ ಓಡಿ ಹೋಗಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದರು.