ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆಸುವುದಕ್ಕಾಗಿ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂಡಲಗಿ, ಗೋಕಾಕದಲ್ಲಿ ಪ್ರಚಾರ ಕೈಗೊಂಡು ಇಲ್ಲೇ ತಂಗಿದ್ದಾರೆ. ಗುರುವಾರವೂ (ಏ.15) ಅವರು ವಿವಿಧೆಡೆ ಮತ ಬೇಟೆ ನಡೆಸಲಿದ್ದಾರೆ. ಸಂಜೆ ಹಿಂಡಲಗಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ನಾಯಕ ದೇವೇಂದ್ರ ಫಡಣವಿಸ್ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.