<p><strong>ಮೂಡಲಗಿ</strong>: ಮೂಡಲಗಿ ಪುರಸಭೆಯ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪುರಸಭೆ ಆವರಣದಲ್ಲಿ ಮಾಡುತ್ತಿರುವ ಮುಷ್ಕರವು ಶುಕ್ರವಾರ ನಾಲ್ಕನೇ ದಿನಕ್ಕೆ ಮುಂದುವರಿಯಿತು.</p>.<p>ಕರ್ನಾಟಕ ನವನಿರ್ಮಾಣ ಸೇನೆಯು ಪೌರ ಕಾರ್ಮಿಕರ ಮುಷ್ಕರಕ್ಕೆ ಬೆಂಬಲವನ್ನು ನೀಡಿ ಮುಷ್ಕರದಲ್ಲಿ ಭಾಗವಹಿಸಿದ್ದರು.</p>.<p>ಕರ್ನಾಟಕ ನವನಿರ್ಮಾಣ ಸೇನೆಯ ತಾಲ್ಲೂಕು ಅಧ್ಯಕ್ಷ ಸಚಿನ ಲಂಕೆನ್ನವರ ಮಾತನಾಡಿ, ‘ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರವು ಬೇಗನೆ ಈಡೇರಿಸಬೇಕು. ಪೌರ ಕಾರ್ಮಿಕರ ಸೇವೆಯು ಅಮೂಲ್ಯವಾಗಿದೆ. ಅವರ ಸೇವೆಯಿಂದ ಊರು, ನಗರಗಳು ಸ್ವಚ್ಛವಾಗಿರಲು ಮತ್ತು ರೋಗಮುಕ್ತವಾಗಿರಲು ಸಾಧ್ಯ ಎಂದರು.</p>.<p>ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಳಂಬ ಮಾಡಿದರೆ ಕರ್ನಾಟಕ ನವನಿರ್ಮಾಣ ಸೇನೆಯು ಅವರೊಂದಿಗೆ ಹೋರಾಟ ಮಾಡುತ್ತದೆ ಎಂದು ಲಂಕೆನ್ನವರ ಹೇಳಿದರು.</p>.<p>ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಪ್ರತಿಭಟನಾಕಾರರು ಮನವಿಯನ್ನು ನೀಡಿದರು.</p>.<p>ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಯಶವಂತ ಶಿದ್ಲಿಂಗಪ್ಪಗೋಳ, ಉಪಾಧ್ಯಕ್ಷ ಶಿವಬೋಧ ಕಪ್ಪಲಗುದ್ದಿ, ಪ್ರಕಾಶ ಮಾಳಾಗೋಳ, ಕರ್ನಾಟಕ ನವನಿರ್ಮಾಣ ಸೇನೆಯ ವಿಠ್ಠಲ ನಾಯಕ, ರಾಜು ಬೆಳಕೂಡ, ಮಂಜು ಸವಸುದ್ದಿ, ಲಕ್ಕಪ್ಪ ನಾಯಕ, ಅಕ್ಷಯ ನೇಮಗೌಡರ, ಶಿವಬೋಧ ಲಕ್ಷ್ಮೇಶ್ವರ, ಕೃಷ್ಣಾ ನಾಯಿಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ</strong>: ಮೂಡಲಗಿ ಪುರಸಭೆಯ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪುರಸಭೆ ಆವರಣದಲ್ಲಿ ಮಾಡುತ್ತಿರುವ ಮುಷ್ಕರವು ಶುಕ್ರವಾರ ನಾಲ್ಕನೇ ದಿನಕ್ಕೆ ಮುಂದುವರಿಯಿತು.</p>.<p>ಕರ್ನಾಟಕ ನವನಿರ್ಮಾಣ ಸೇನೆಯು ಪೌರ ಕಾರ್ಮಿಕರ ಮುಷ್ಕರಕ್ಕೆ ಬೆಂಬಲವನ್ನು ನೀಡಿ ಮುಷ್ಕರದಲ್ಲಿ ಭಾಗವಹಿಸಿದ್ದರು.</p>.<p>ಕರ್ನಾಟಕ ನವನಿರ್ಮಾಣ ಸೇನೆಯ ತಾಲ್ಲೂಕು ಅಧ್ಯಕ್ಷ ಸಚಿನ ಲಂಕೆನ್ನವರ ಮಾತನಾಡಿ, ‘ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರವು ಬೇಗನೆ ಈಡೇರಿಸಬೇಕು. ಪೌರ ಕಾರ್ಮಿಕರ ಸೇವೆಯು ಅಮೂಲ್ಯವಾಗಿದೆ. ಅವರ ಸೇವೆಯಿಂದ ಊರು, ನಗರಗಳು ಸ್ವಚ್ಛವಾಗಿರಲು ಮತ್ತು ರೋಗಮುಕ್ತವಾಗಿರಲು ಸಾಧ್ಯ ಎಂದರು.</p>.<p>ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಳಂಬ ಮಾಡಿದರೆ ಕರ್ನಾಟಕ ನವನಿರ್ಮಾಣ ಸೇನೆಯು ಅವರೊಂದಿಗೆ ಹೋರಾಟ ಮಾಡುತ್ತದೆ ಎಂದು ಲಂಕೆನ್ನವರ ಹೇಳಿದರು.</p>.<p>ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಪ್ರತಿಭಟನಾಕಾರರು ಮನವಿಯನ್ನು ನೀಡಿದರು.</p>.<p>ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಯಶವಂತ ಶಿದ್ಲಿಂಗಪ್ಪಗೋಳ, ಉಪಾಧ್ಯಕ್ಷ ಶಿವಬೋಧ ಕಪ್ಪಲಗುದ್ದಿ, ಪ್ರಕಾಶ ಮಾಳಾಗೋಳ, ಕರ್ನಾಟಕ ನವನಿರ್ಮಾಣ ಸೇನೆಯ ವಿಠ್ಠಲ ನಾಯಕ, ರಾಜು ಬೆಳಕೂಡ, ಮಂಜು ಸವಸುದ್ದಿ, ಲಕ್ಕಪ್ಪ ನಾಯಕ, ಅಕ್ಷಯ ನೇಮಗೌಡರ, ಶಿವಬೋಧ ಲಕ್ಷ್ಮೇಶ್ವರ, ಕೃಷ್ಣಾ ನಾಯಿಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>