ಗ್ರಾಮದಲ್ಲಿ ಹೊಂದಿಕೊಂಡಿರುವ ಅಪಾರ ಬೆಲೆ ಬಾಳುವ ಒಂದು ಎಕರೆ ಭೂಮಿಯಲ್ಲಿಯೇ ಕ್ರೀಡಾಂಗಣ ನಿರ್ಮಿಸಲು ಅಣಿಯಾದರು. ಆ ಸೇವಾ ಕೈಂಕರ್ಯಕ್ಕೆ ತಂದೆ ವಿಲಾಸರಾವ್ ದೇಶಪಾಂಡೆ ಅವರೂ ಪ್ರೋತ್ಸಾಹ ನೀಡಿದರು. ರಾಹುಲ್ ಅವರೇ ಶ್ರಮದಾನದ ಮೂಲಕ ಭೂಮಿಯನ್ನು ಸಮತಟ್ಟಾಗಿಸಿದರು. ಪ್ರವೇಶದ್ವಾರ, ಕಾಂಪೌಂಡ್ ಕೂಡ ಕಟ್ಟಿದ್ದಾರೆ. ಕಬಡ್ಡಿ, ವಾಲಿಬಾಲ್, ರನ್ನಿಂಗ್ ಟ್ರ್ಯಾಕ್, ಕೊಕ್ಕೊ, ಕುಸ್ತಿ ಮೊದಲಾದ ಕ್ರೀಡೆಗಳ ಅಂಕಣಗಳನ್ನೂ ರಚಿಸಿದರು. ಕ್ರೀಡಾಂಗಣಕ್ಕೆ ‘ಹುತಾತ್ಮ ಭಗತ್ಸಿಂಗ್ ಕ್ರೀಡಾಂಗಣ’ ಎಂದು ಹೆಸರು ನಾಮಕರಣ ಮಾಡಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೈದಾನದಲ್ಲಿ ಯುವಕರು, ಮಕ್ಕಳು ಕ್ರೀಡೆ, ವ್ಯಾಯಾಮದಲ್ಲಿ ತೊಡಗಿರುವುದನ್ನು ಕಂಡು ಧನ್ಯತಾಭಾವ ಹೊಂದುತ್ತಿದ್ದಾರೆ.