ಬೆಳಗಾವಿಯ ಅಶೋಕ ನಗರದ ನಾಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿರುವುದು
ಮಳೆಯಿಂದ ಬೆಳಗಾವಿಯಲ್ಲಿ ಹಾನಿಗೀಡಾಗಿದ್ದ ವಿದ್ಯುತ್ ಕಂಬವನ್ನು ಹೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡುತ್ತಿರುವುದು
ಮಳೆಗಾಲದಲ್ಲಿ ಯಾರಿಗೆ ತೊಂದರೆಯಾದರೂ ತ್ವರಿತವಾಗಿ ಸ್ಪಂದಿಸಲು ನಾಲ್ಕು ತುರ್ತು ಸ್ಪಂದನಾ ತಂಡಗಳನ್ನು ನಿಯೋಜಿಸಿದ್ದೇವೆ
–ಪಿ.ಎನ್.ಲೋಕೇಶ ಆಯುಕ್ತ ಮಹಾನಗರ ಪಾಲಿಕೆ
ಮಳೆಗಾಲದಲ್ಲಿ ವಿದ್ಯುತ್ ಅವಘಡ ಸಂಭವಿಸಿದರೆ 24x7 ಮಾದರಿಯಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿದ್ದೇವೆ. ಇದಕ್ಕಾಗಿ ವಾಹನ ಸಿಬ್ಬಂದಿ ಕಾಯ್ದಿರಿಸಿದ್ದೇವೆ
–ಅಶ್ವಿನ್ ಶಿಂಧೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೆಸ್ಕಾಂ ಬೆಳಗಾವಿ ನಗರ ಉಪವಿಭಾಗ
ಪ್ರತಿಬಾರಿ ಮಳೆಗಾಲದಲ್ಲಿ ದೊಡ್ಡ ಅನಾಹುತವಾದ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಇದರ ಬದಲಿಗೆ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು
–ವೀರೇಂದ್ರ ಗೊಬರಿ ವಾಹನ ಸವಾರ
ಸಹಾಯವಾಣಿ ಕೇಂದ್ರ ಸ್ಥಾಪನೆ
ಮಳೆಗಾಲದಲ್ಲಿ ಸ್ಥಳೀಯ ದೂರುಗಳಿಗೆ ಸ್ಪಂದಿಸಲು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಮಳೆಗೆ ಸಂಬಂಧಿಸಿ ಏನೇ ದೂರುಗಳಿದ್ದರೂ 0831–2405337 ಈ ಸಂಖ್ಯೆಗೆ ಕರೆ ಮಾಡಬಹುದು. ‘ಮಳೆ ಸುರಿದಾಗ ಪ್ರತಿದಿನ ಸರಾಸರಿ 10 ಕರೆ ಬರುತ್ತಿವೆ. ಚರಂಡಿಗಳು ಬ್ಲಾಕ್ ಆಗಿ ರಸ್ತೆ ಮೇಲೆ ಕೊಳಚೆ ನೀರು ಹರಿಯುವ ಬಗ್ಗೆಯೇ ಜನ ಹೆಚ್ಚಾಗಿ ದೂರುತ್ತಿದ್ದಾರೆ. ದೂರು ಬಂದ ಸ್ಥಳಕ್ಕೆ ಕೂಡಲೇ ಸಿಬ್ಬಂದಿ ಕಳುಹಿಸಿ ಸಮಸ್ಯೆ ಇತ್ಯರ್ಥಪಡಿಸಲಾಗುತ್ತಿದೆ’ ಎಂದು ಸಹಾಯವಾಣಿ ಕೇಂದ್ರದ ಸಿಬ್ಬಂದಿ ಹೇಳಿದರು.
ಅತಿಕ್ರಮಣ ತೆರವಾಗಲಿ
ಬೆಳಗಾವಿಯ ವಡಗಾವಿಯ ಆನಂದ ನಗರದ ಮನೆಗಳಿಗೆ ಶನಿವಾರ ರಾತ್ರಿ ನೀರು ನುಗ್ಗಿದ್ದರಿಂದ ಜನರು ಪ್ರಯಾಸ ಪಡಬೇಕಾಯಿತು. ‘ಆನಂದ ನಗರದ ನಾಲೆ ಅತಿಕ್ರಮಣವಾಗಿದೆ. ನೀರು ಹರಿಯಬೇಕಿದ್ದ ಜಾಗದಲ್ಲಿ ತಗಡಿನ ಶೆಡ್ ತಲೆ ಎತ್ತಿದ್ದು, ಮಳೆನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಯಾರೋ ಮಾಡಿದ ತಪ್ಪಿನಿಂದ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಪಾಲಿಕೆ ಅಧಿಕಾರಿಗಳು ಕೂಡಲೇ ಅತಿಕ್ರಮಣ ತೆರವಿಗೆ ಮುಂದಾಗಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.