‘ತಪ್ಪು ಮಾಡಿದ್ದರೆ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಲಿ. ಆದರೆ, ಆ ಆತ್ಮಹತ್ಯೆ ನಿರ್ಧಾರಕ್ಕೆ ಆತ ಬಂದಿದ್ದೇಕೆ ಎನ್ನುವುದೇ ಪ್ರಶ್ನೆ. ವಾರದ ಹಿಂದೆ, ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಫೋನ್ ಮಾಡಿದ್ದನಂತೆ. ಸಾಹುಕಾರ್ (ನಾನು) ಮಂತ್ರಿ ಆಗುತ್ತಾರೆ. ಆಗ ಎಲ್ಲವೂ ಸರಿಯಾಗಲಿದೆ. ನನಗೇನು ಭಯ ಎಂದು ಖುಷಿಯಿಂದ ಹೇಳಿದ್ದನಂತೆ. ಅವನ ಸಾವು ಪ್ರಶ್ನೆಯಾಗಿಯೇ ಉಳಿದಿದೆ. ಪ್ರಕರಣದ ಸಮಗ್ರ ತನಿಖೆ ಆಗಬೇಕು’ ಎಂದು ಹೇಳಿದ್ದಾರೆ.