<p><strong>ತೆಲಸಂಗ: </strong>‘ಕೋವಿಡ್ ಸಂದರ್ಭದಲ್ಲೂ ಜೀವದ ಹಂಗು ತೊರೆದು ಮುಂಜಾನೆಯೇ ಮನೆಮನೆಗೆ ಪತ್ರಿಕೆ ತಲಿಪಿಸುವ ವಿತರಕರು, ಸುದ್ದಿಗಳನ್ನು ಸಿದ್ಧಪಡಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು’ ಎಂದು ಬಿಜೆಪಿ ಮುಖಂಡ ಚಿದಾನಂದ ಸವದಿ ಹೇಳಿದರು.</p>.<p>ಸಮೀಪದ ಕನ್ನಾಳ ಗ್ರಾಮದಲ್ಲಿ ಗ್ರಾಮೀಣ ಪತ್ರಕರ್ತರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.</p>.<p>‘ಜನರಿಗೆ ಸ್ಫೂರ್ತಿ ನೀಡುವ ವರದಿಗಳನ್ನು ಪತ್ರಿಕೆಗಳು ಕೊಡುತ್ತುವೆ. ಯಾವುದೇ ತೊಂದರೆ ಹಾಗೂ ತಪ್ಪಾದಲ್ಲಿ ಬೆಳಕು ಚೆಲ್ಲುವ ಪತ್ರಿಕೆಗಳ ಕೆಲಸ ಮಹೋನ್ನತವಾದುದು’ ಎಂದರು.</p>.<p>‘ಪತ್ರಕರ್ತರು, ವಿತರಕರು, ಬಡವರು, ರೈತರು, ಕೂಲಿಕಾರ್ಮಿಕರು, ಶೋಷಿತರ ಸೇವೆಗೆ ಸಿದ್ಧರಿದ್ದು, ಕಷ್ಟ ಹೇಳಿಕೊಂಡು ಬಂದವರ ಸೇವೆಯಲ್ಲಿಯೇ ದೇವರನ್ನು ಕಾಣುತ್ತೇವೆ. ನಂಬಿದ ಜನ ಸಂದಿಗ್ದ ಸ್ಥಿತಿಯಲ್ಲಿ ಸಿಲುಕಿದಾಗ ಮೌನದಿಂದ ಕೆಲಸ ಮಾಡುವ ಸಂಸ್ಕಾರ ತಂದೆ ಲಕ್ಷ್ಮಣ ಸವದಿ ಅವರದು’ ಎಂದು ಹೇಳಿದರು.</p>.<p>‘ಸಂಕಷ್ಟದ ಸಂದರ್ಭವನ್ನು ಒಟ್ಟಾಗಿ ಎದುರಿಸಬೇಕಾದ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಾ ಕುಳಿತರೆ ದೇವರು ಮೆಚ್ಚಲಾರ’ ಎಂದರು.</p>.<p>ಮುಖಂಡರಾದ ಸುಶೀಲಕುಮಾರ ಪತ್ತಾರ, ಯಂಕಣ್ಣ ಅಸ್ಕಿ, ಅಮೋಘ ಖೊಬ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಸಂಗ: </strong>‘ಕೋವಿಡ್ ಸಂದರ್ಭದಲ್ಲೂ ಜೀವದ ಹಂಗು ತೊರೆದು ಮುಂಜಾನೆಯೇ ಮನೆಮನೆಗೆ ಪತ್ರಿಕೆ ತಲಿಪಿಸುವ ವಿತರಕರು, ಸುದ್ದಿಗಳನ್ನು ಸಿದ್ಧಪಡಿಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು’ ಎಂದು ಬಿಜೆಪಿ ಮುಖಂಡ ಚಿದಾನಂದ ಸವದಿ ಹೇಳಿದರು.</p>.<p>ಸಮೀಪದ ಕನ್ನಾಳ ಗ್ರಾಮದಲ್ಲಿ ಗ್ರಾಮೀಣ ಪತ್ರಕರ್ತರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.</p>.<p>‘ಜನರಿಗೆ ಸ್ಫೂರ್ತಿ ನೀಡುವ ವರದಿಗಳನ್ನು ಪತ್ರಿಕೆಗಳು ಕೊಡುತ್ತುವೆ. ಯಾವುದೇ ತೊಂದರೆ ಹಾಗೂ ತಪ್ಪಾದಲ್ಲಿ ಬೆಳಕು ಚೆಲ್ಲುವ ಪತ್ರಿಕೆಗಳ ಕೆಲಸ ಮಹೋನ್ನತವಾದುದು’ ಎಂದರು.</p>.<p>‘ಪತ್ರಕರ್ತರು, ವಿತರಕರು, ಬಡವರು, ರೈತರು, ಕೂಲಿಕಾರ್ಮಿಕರು, ಶೋಷಿತರ ಸೇವೆಗೆ ಸಿದ್ಧರಿದ್ದು, ಕಷ್ಟ ಹೇಳಿಕೊಂಡು ಬಂದವರ ಸೇವೆಯಲ್ಲಿಯೇ ದೇವರನ್ನು ಕಾಣುತ್ತೇವೆ. ನಂಬಿದ ಜನ ಸಂದಿಗ್ದ ಸ್ಥಿತಿಯಲ್ಲಿ ಸಿಲುಕಿದಾಗ ಮೌನದಿಂದ ಕೆಲಸ ಮಾಡುವ ಸಂಸ್ಕಾರ ತಂದೆ ಲಕ್ಷ್ಮಣ ಸವದಿ ಅವರದು’ ಎಂದು ಹೇಳಿದರು.</p>.<p>‘ಸಂಕಷ್ಟದ ಸಂದರ್ಭವನ್ನು ಒಟ್ಟಾಗಿ ಎದುರಿಸಬೇಕಾದ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಾ ಕುಳಿತರೆ ದೇವರು ಮೆಚ್ಚಲಾರ’ ಎಂದರು.</p>.<p>ಮುಖಂಡರಾದ ಸುಶೀಲಕುಮಾರ ಪತ್ತಾರ, ಯಂಕಣ್ಣ ಅಸ್ಕಿ, ಅಮೋಘ ಖೊಬ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>