<p><strong>ಬೆಳಗಾವಿ</strong>: ‘ರಾಜ್ಯ ಸರ್ಕಾರ ನೀಡಿದ ಒಳ ಮೀಸಲಾತಿಯಲ್ಲಿ ಭೋವಿ ವಡ್ಡರ ಸಮಾಜಕ್ಕೆ ಅನ್ಯಾಯವಾಗಿದೆ. ಹೀಗಾಗಿ ನಮಗೆ ಪ್ರತ್ಯೇಕ ಮೀಸಲಾತಿ ಘೋಷಿಸಬೇಕು’ ಎಂದು ಭೂಮಿ ವಡ್ಡರ ಸೋಷಿಯಲ್ ವೆಲ್ಫೇರ್ ಸೊಸೈಟಿ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಜಿ. ಗಾಡಿವಡ್ಡರ ಒತ್ತಾಯಿಸಿದರು.</p>.<p>ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೋವಿ ವಡ್ಡರ ಸಮಾಜದಲ್ಲಿ ಒಟ್ಟು 101 ಹಿಂದುಳಿದ ಜಾತಿಗಳಿದ್ದು, ಆಯಾ ಜಾತಿಗಳ ಜನಸಂಖ್ಯೆಯು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ನೀಡಿರುವ ಒಳ ಮೀಸಲಾತಿ ಆದೇಶ ಸರಿ ಇಲ್ಲ. ಅದನ್ನು ಪುನರ್ ಪರಿಶೀಲಿಸಬೇಕು. ಇಲ್ಲವೇ ರದ್ದುಪಡಿಸಬೇಕು’ ಎಂದರು.</p>.<p>‘ಹಿಂದೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನೀಡಿದ ಮೀಸಲಾತಿಯೆ ಉತ್ತಮವಾಗಿತ್ತು. ಆದರೆ, ಈ ಬಾರಿ ನೀಡಿರುವ ಒಳ ಮೀಸಲಾತಿಯಲ್ಲಿ ಭೋವಿ ವಡ್ಡರ ಸಮಾಜಕ್ಕೆ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಒಳ ಮೀಸಲಾತಿ ಆದೇಶ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಎಲ್ಲ ಭೋವಿ ವಡ್ಡರ ಸಮುದಾಯದ ಜನರು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಮುಖಂಡರಾದ ಮೋಹನ ಗಾಡಿ ವಡ್ಡರ, ಪವನ ಮಾಲಿಂಗಪುರ, ಕೆ.ಎಸ್. ಮಮದಾಪುರ, ಭರ್ಮು ಗಾಡಿವಡ್ಡರ, ಶೆಟ್ಟೆಪ್ಪ ಗಾಡಿ ವಡ್ಡರ, ಅವಿನಾಶ ಗಾಡಿ ವಡ್ಡರ ಸೇರಿದಂತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ರಾಜ್ಯ ಸರ್ಕಾರ ನೀಡಿದ ಒಳ ಮೀಸಲಾತಿಯಲ್ಲಿ ಭೋವಿ ವಡ್ಡರ ಸಮಾಜಕ್ಕೆ ಅನ್ಯಾಯವಾಗಿದೆ. ಹೀಗಾಗಿ ನಮಗೆ ಪ್ರತ್ಯೇಕ ಮೀಸಲಾತಿ ಘೋಷಿಸಬೇಕು’ ಎಂದು ಭೂಮಿ ವಡ್ಡರ ಸೋಷಿಯಲ್ ವೆಲ್ಫೇರ್ ಸೊಸೈಟಿ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಜಿ. ಗಾಡಿವಡ್ಡರ ಒತ್ತಾಯಿಸಿದರು.</p>.<p>ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೋವಿ ವಡ್ಡರ ಸಮಾಜದಲ್ಲಿ ಒಟ್ಟು 101 ಹಿಂದುಳಿದ ಜಾತಿಗಳಿದ್ದು, ಆಯಾ ಜಾತಿಗಳ ಜನಸಂಖ್ಯೆಯು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ನೀಡಿರುವ ಒಳ ಮೀಸಲಾತಿ ಆದೇಶ ಸರಿ ಇಲ್ಲ. ಅದನ್ನು ಪುನರ್ ಪರಿಶೀಲಿಸಬೇಕು. ಇಲ್ಲವೇ ರದ್ದುಪಡಿಸಬೇಕು’ ಎಂದರು.</p>.<p>‘ಹಿಂದೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನೀಡಿದ ಮೀಸಲಾತಿಯೆ ಉತ್ತಮವಾಗಿತ್ತು. ಆದರೆ, ಈ ಬಾರಿ ನೀಡಿರುವ ಒಳ ಮೀಸಲಾತಿಯಲ್ಲಿ ಭೋವಿ ವಡ್ಡರ ಸಮಾಜಕ್ಕೆ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಒಳ ಮೀಸಲಾತಿ ಆದೇಶ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಎಲ್ಲ ಭೋವಿ ವಡ್ಡರ ಸಮುದಾಯದ ಜನರು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.</p>.<p>ಮುಖಂಡರಾದ ಮೋಹನ ಗಾಡಿ ವಡ್ಡರ, ಪವನ ಮಾಲಿಂಗಪುರ, ಕೆ.ಎಸ್. ಮಮದಾಪುರ, ಭರ್ಮು ಗಾಡಿವಡ್ಡರ, ಶೆಟ್ಟೆಪ್ಪ ಗಾಡಿ ವಡ್ಡರ, ಅವಿನಾಶ ಗಾಡಿ ವಡ್ಡರ ಸೇರಿದಂತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>