<p><strong>ಬೆಳಗಾವಿ:</strong> ‘ಸಾಹಿತಿಗಳು ವಸ್ತುಸ್ಥಿತಿ ಅರಿತು ಬರೆಯಬೇಕು. ಸಾಹಿತ್ಯ ಕೃತಿಗಳ ಬಗ್ಗೆ ಸಮಾಜದಲ್ಲಿ ಚರ್ಚೆಯಾಗಬೇಕು’ ಎಂದು ಸಾಹಿತಿ ಚಂದ್ರಕಾಂತ ಕುಸನೂರ ಹೇಳಿದರು.</p>.<p>ಇಲ್ಲಿನ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿ.ಎ.ಸನದಿ ಪ್ರತಿಷ್ಠಾನದಿಂದ ಭಾನುವಾರ ನಡೆದ ‘ಸರಜೂ ಕಾಟ್ಕರ್ ಅವರ ಸಾಹಿತ್ಯ ಅವಲೋಕನ–ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.</p>.<p>‘ಲೇಖಕರು, ಕವಿಗಳಿಂದ ಕನ್ನಡದಲ್ಲಿ ರಚನೆಯಾಗಿರುವ ಸಾಹಿತ್ಯಗಳ ಮೌಲ್ಯಮಾಪನವಾಗಬೇಕು. ಈ ಸಾಹಿತ್ಯ ಸಮಾಜಕ್ಕೆ ಎಷ್ಟರಮಟ್ಟಿಗೆ ಅಗತ್ಯವಿದೆ ಎಂಬುದನ್ನು ತಿಳಿಯಬೇಕು. ಮರಾಠಿ, ಬಂಗಾಳಿಯಲ್ಲಿ ಪ್ರತಿ ಕೃತಿಯ ಮೌಲ್ಯಮಾಪನವಾಗುತ್ತಿದೆ. ಹಿಂದಿ ಸಾಹಿತ್ಯಿಕ ವಲಯದಲ್ಲಿಈ ಕೆಲಸವಾಗುತ್ತಿದೆ.ಆದ ಕಾರಣ ಉತ್ತಮ ಪುಸ್ತಕಗಳು ಓದುಗರ ಕೈಗೆ ಸಿಗುವಂತಾಗಿದೆ. ಕನ್ನಡದಲ್ಲಿ ಈ ಕೆಲಸವಾಗಬೇಕು’ ಎಂದು ಹೇಳಿದರು.</p>.<p class="Subhead"><strong>ವಿಮರ್ಶಿಸಬೇಕು:</strong>‘ಕಾದಂಬರಿಗಳು ವಾಸ್ತವ ಹಾಗೂ ಸತ್ಯವನ್ನು ತಿಳಿಸುತ್ತವೆ. ಇವುಗಳನ್ನು ರಚಿಸುವುದಕ್ಕಾಗಿ ಲೇಖಕರು ಸತತ ಅಧ್ಯಯನಶೀಲವಾಗಿರಬೇಕು. ಪ್ರತಿ 5 ವರ್ಷಗಳಿಗೊಮ್ಮೆ ತಾನು ರಚಿಸಿದ ಕೃತಿಗಳನ್ನೆಲ್ಲ ನಿಷ್ಪಕ್ಷತವಾಗಿ ವಿಮರ್ಶಿಸಬೇಕು. ಆಗ ತಾವು ಬರೆದ ಸಾಹಿತ್ಯ, ಕೃತಿಗಳ ಮೌಲ್ಯ ಗೊತ್ತಾಗುತ್ತದೆ’ ಎಂದರು.</p>.<p>ಲೇಖಕ ಶಿರೀಷ ಜೋಶಿ ಅವರು ‘ಸರಜೂ ಕಾಟ್ಕರ್ ಅವರ ಕಾದಂಬರಿ’ ಕುರಿತು ಮಾತನಾಡಿ,‘ತರಾಸು, ಎಸ್.ಎಲ್. ಭೈರಪ್ಪ ಅವರಂತಹ ಕಾದಂಬರಿಕಾರರಲ್ಲಿ ಸರಜೂ ಕಾಟ್ಕರೂ ಸಹ ಒಬ್ಬರಾಗಿದ್ದಾರೆ. ಅವರು ಬರೆದ ಸಾವಿತ್ರಿಭಾಯಿ ಪುಲೆ, ಬಾಜಿರಾವ್ ಮಸ್ತಾನಿ ಸೇರಿ 5 ಕಾದಂಬರಿಗಳು ಚಿತ್ರಗಳಾಗಿವೆ. ಎಲ್ಲ ಕಾದಂಬರಿಗಳುತುಡಿತವನ್ನು ಮೂಲ ಸೂತ್ರವನ್ನಾಗಿ ಇಟ್ಟುಕೊಂಡು ರಚನೆಗೊಂಡಿವೆ’ ಎಂದು ಹೇಳಿದರು.</p>.<p>ಸಾಹಿತಿ ಪ್ರೊ.ಜ್ಯೋತಿ ಹೊಸುರ ಅಧ್ಯಕ್ಷತೆ ವಹಿಸಿದ್ದರು. ಸರಜೂ ಕಾಟ್ಕರ್ ದಂಪತಿಯನ್ನು ಸನ್ಮಾನಿಸಲಾಯಿತು.</p>.<p>ಸಾಹಿತಿಗಳಾದ ಡಾ.ಪಿ. ನಾಗರಾಜ, ಡಾ.ರಾಮಕೃಷ್ಣ ಮರಾಠೆ, ಡಾ.ಡಿ.ಎಸ್. ಚೌಗಲೆ, ಡಾ.ಪಿ.ಜಿ. ಕೆಂಪಣ್ಣವರ, ಡಾ.ಎ.ಬಿ. ಘಾಟಗೆ, ಯ.ರು. ಪಾಟೀಲ, ರವಿ ಕೊಟಾರಗಸ್ತಿ, ಹಮೀದಾ ಬೇಗಂ ದೇಸಾಯಿ ಇದ್ದರು.</p>.<p>ಆಶಾ ಯಮಕನಮರಡಿ ಭಾವಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಎ.ಎ. ಸನದಿ ನಿರೂಪಿಸಿದರು. ಎಂ.ವೈ. ಮೆಣಸಿನಕಾಯಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಸಾಹಿತಿಗಳು ವಸ್ತುಸ್ಥಿತಿ ಅರಿತು ಬರೆಯಬೇಕು. ಸಾಹಿತ್ಯ ಕೃತಿಗಳ ಬಗ್ಗೆ ಸಮಾಜದಲ್ಲಿ ಚರ್ಚೆಯಾಗಬೇಕು’ ಎಂದು ಸಾಹಿತಿ ಚಂದ್ರಕಾಂತ ಕುಸನೂರ ಹೇಳಿದರು.</p>.<p>ಇಲ್ಲಿನ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿ.ಎ.ಸನದಿ ಪ್ರತಿಷ್ಠಾನದಿಂದ ಭಾನುವಾರ ನಡೆದ ‘ಸರಜೂ ಕಾಟ್ಕರ್ ಅವರ ಸಾಹಿತ್ಯ ಅವಲೋಕನ–ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.</p>.<p>‘ಲೇಖಕರು, ಕವಿಗಳಿಂದ ಕನ್ನಡದಲ್ಲಿ ರಚನೆಯಾಗಿರುವ ಸಾಹಿತ್ಯಗಳ ಮೌಲ್ಯಮಾಪನವಾಗಬೇಕು. ಈ ಸಾಹಿತ್ಯ ಸಮಾಜಕ್ಕೆ ಎಷ್ಟರಮಟ್ಟಿಗೆ ಅಗತ್ಯವಿದೆ ಎಂಬುದನ್ನು ತಿಳಿಯಬೇಕು. ಮರಾಠಿ, ಬಂಗಾಳಿಯಲ್ಲಿ ಪ್ರತಿ ಕೃತಿಯ ಮೌಲ್ಯಮಾಪನವಾಗುತ್ತಿದೆ. ಹಿಂದಿ ಸಾಹಿತ್ಯಿಕ ವಲಯದಲ್ಲಿಈ ಕೆಲಸವಾಗುತ್ತಿದೆ.ಆದ ಕಾರಣ ಉತ್ತಮ ಪುಸ್ತಕಗಳು ಓದುಗರ ಕೈಗೆ ಸಿಗುವಂತಾಗಿದೆ. ಕನ್ನಡದಲ್ಲಿ ಈ ಕೆಲಸವಾಗಬೇಕು’ ಎಂದು ಹೇಳಿದರು.</p>.<p class="Subhead"><strong>ವಿಮರ್ಶಿಸಬೇಕು:</strong>‘ಕಾದಂಬರಿಗಳು ವಾಸ್ತವ ಹಾಗೂ ಸತ್ಯವನ್ನು ತಿಳಿಸುತ್ತವೆ. ಇವುಗಳನ್ನು ರಚಿಸುವುದಕ್ಕಾಗಿ ಲೇಖಕರು ಸತತ ಅಧ್ಯಯನಶೀಲವಾಗಿರಬೇಕು. ಪ್ರತಿ 5 ವರ್ಷಗಳಿಗೊಮ್ಮೆ ತಾನು ರಚಿಸಿದ ಕೃತಿಗಳನ್ನೆಲ್ಲ ನಿಷ್ಪಕ್ಷತವಾಗಿ ವಿಮರ್ಶಿಸಬೇಕು. ಆಗ ತಾವು ಬರೆದ ಸಾಹಿತ್ಯ, ಕೃತಿಗಳ ಮೌಲ್ಯ ಗೊತ್ತಾಗುತ್ತದೆ’ ಎಂದರು.</p>.<p>ಲೇಖಕ ಶಿರೀಷ ಜೋಶಿ ಅವರು ‘ಸರಜೂ ಕಾಟ್ಕರ್ ಅವರ ಕಾದಂಬರಿ’ ಕುರಿತು ಮಾತನಾಡಿ,‘ತರಾಸು, ಎಸ್.ಎಲ್. ಭೈರಪ್ಪ ಅವರಂತಹ ಕಾದಂಬರಿಕಾರರಲ್ಲಿ ಸರಜೂ ಕಾಟ್ಕರೂ ಸಹ ಒಬ್ಬರಾಗಿದ್ದಾರೆ. ಅವರು ಬರೆದ ಸಾವಿತ್ರಿಭಾಯಿ ಪುಲೆ, ಬಾಜಿರಾವ್ ಮಸ್ತಾನಿ ಸೇರಿ 5 ಕಾದಂಬರಿಗಳು ಚಿತ್ರಗಳಾಗಿವೆ. ಎಲ್ಲ ಕಾದಂಬರಿಗಳುತುಡಿತವನ್ನು ಮೂಲ ಸೂತ್ರವನ್ನಾಗಿ ಇಟ್ಟುಕೊಂಡು ರಚನೆಗೊಂಡಿವೆ’ ಎಂದು ಹೇಳಿದರು.</p>.<p>ಸಾಹಿತಿ ಪ್ರೊ.ಜ್ಯೋತಿ ಹೊಸುರ ಅಧ್ಯಕ್ಷತೆ ವಹಿಸಿದ್ದರು. ಸರಜೂ ಕಾಟ್ಕರ್ ದಂಪತಿಯನ್ನು ಸನ್ಮಾನಿಸಲಾಯಿತು.</p>.<p>ಸಾಹಿತಿಗಳಾದ ಡಾ.ಪಿ. ನಾಗರಾಜ, ಡಾ.ರಾಮಕೃಷ್ಣ ಮರಾಠೆ, ಡಾ.ಡಿ.ಎಸ್. ಚೌಗಲೆ, ಡಾ.ಪಿ.ಜಿ. ಕೆಂಪಣ್ಣವರ, ಡಾ.ಎ.ಬಿ. ಘಾಟಗೆ, ಯ.ರು. ಪಾಟೀಲ, ರವಿ ಕೊಟಾರಗಸ್ತಿ, ಹಮೀದಾ ಬೇಗಂ ದೇಸಾಯಿ ಇದ್ದರು.</p>.<p>ಆಶಾ ಯಮಕನಮರಡಿ ಭಾವಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಎ.ಎ. ಸನದಿ ನಿರೂಪಿಸಿದರು. ಎಂ.ವೈ. ಮೆಣಸಿನಕಾಯಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>