<p><strong>ರಾಮದುರ್ಗ</strong>: ಪಟ್ಟಣದ ಅಂಬೇಡ್ಕರ್ ನಗರದ ದಲಿತ ಸಮಾಜದವರು ನಿರ್ಮಿಸಿದ ದುರಗಮ್ಮ ಮತ್ತು ಮರಗಮ್ಮ ನೂತನ ಮೂರ್ತಿಗಳನ್ನು ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆಯಲ್ಲಿ ಬರಮಾಡಿಕೊಂಡರು.</p>.<p>ಮರಗಮ್ಮ, ದುರಗಮ್ಮ ಮೂರ್ತಿಗಳನ್ನು ಸಂಗಳದ ದ್ಯಾಮಣ್ಣ ಕಲಾಕಾರ ಸುಮಾರು ಒಂದು ತಿಂಗಳಿಂದಲೂ ನಿರಂತರ ಶ್ರಮಿಸಿ ಕೆತ್ತಿದ್ದಾರೆ. ವೆಂಕಟೇಶ್ವರ ದೇವಸ್ಥಾನದಿಂದ ಅಲಂಕೃತ ಟ್ರ್ಯಾಕ್ಟರ್ ಮೂಲಕ ತೇರಬಜಾರ್, ಜುನಿಪೇಠ, ಅಂಬೇಡ್ಕರ್ ಬೀದಿ, ಹಳೇ ಬಸ್ ನಿಲ್ದಾಣ, ಮಿನಿವಿಧಾನಸೌಧ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. </p>.<p>ಮಂಗಳವಾರ ಬೆಳಿಗ್ಗೆ ನೂತನ ಮೂರ್ತಿಗಳಿಗೆ ವಿಶೇಷ ಪೂಜೆ, ಪುನಸ್ಕಾರಗಳು ಜರುಗಿದವು. ಹಾಲು, ತುಪ್ಪದ ಅಭಿಷೇಕ ಜರುಗಿತು. ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು.</p>.<p>ಮುಳ್ಳೂರು ಅನ್ನದಾನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ನಗರದ ದೇವಸ್ಥಾನಕ್ಕೆ ಮಹಾದ್ವಾರದ ಅಗತ್ಯ ಇದೆ. ಇದರ ನಿರ್ಮಾಣಕ್ಕೆ ಶ್ರೀಮಠದಿಂದ ಒಂದು ಸಾವಿರ ದೇಣಿಗೆ ನೀಡಿ ಮುಂದಿನ ವರ್ಷಕ್ಕೆ ಉದ್ಘಾಟನೆಯಾಗಲಿ ಎಂದು ಹರಿಸಿದರು.</p>.<p>ಇಲ್ಲಿನ ಮಳೆರಾಜ ಮಠದ ಮಳೆಯಪ್ಪ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳು, ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ</strong>: ಪಟ್ಟಣದ ಅಂಬೇಡ್ಕರ್ ನಗರದ ದಲಿತ ಸಮಾಜದವರು ನಿರ್ಮಿಸಿದ ದುರಗಮ್ಮ ಮತ್ತು ಮರಗಮ್ಮ ನೂತನ ಮೂರ್ತಿಗಳನ್ನು ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆಯಲ್ಲಿ ಬರಮಾಡಿಕೊಂಡರು.</p>.<p>ಮರಗಮ್ಮ, ದುರಗಮ್ಮ ಮೂರ್ತಿಗಳನ್ನು ಸಂಗಳದ ದ್ಯಾಮಣ್ಣ ಕಲಾಕಾರ ಸುಮಾರು ಒಂದು ತಿಂಗಳಿಂದಲೂ ನಿರಂತರ ಶ್ರಮಿಸಿ ಕೆತ್ತಿದ್ದಾರೆ. ವೆಂಕಟೇಶ್ವರ ದೇವಸ್ಥಾನದಿಂದ ಅಲಂಕೃತ ಟ್ರ್ಯಾಕ್ಟರ್ ಮೂಲಕ ತೇರಬಜಾರ್, ಜುನಿಪೇಠ, ಅಂಬೇಡ್ಕರ್ ಬೀದಿ, ಹಳೇ ಬಸ್ ನಿಲ್ದಾಣ, ಮಿನಿವಿಧಾನಸೌಧ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. </p>.<p>ಮಂಗಳವಾರ ಬೆಳಿಗ್ಗೆ ನೂತನ ಮೂರ್ತಿಗಳಿಗೆ ವಿಶೇಷ ಪೂಜೆ, ಪುನಸ್ಕಾರಗಳು ಜರುಗಿದವು. ಹಾಲು, ತುಪ್ಪದ ಅಭಿಷೇಕ ಜರುಗಿತು. ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು.</p>.<p>ಮುಳ್ಳೂರು ಅನ್ನದಾನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ನಗರದ ದೇವಸ್ಥಾನಕ್ಕೆ ಮಹಾದ್ವಾರದ ಅಗತ್ಯ ಇದೆ. ಇದರ ನಿರ್ಮಾಣಕ್ಕೆ ಶ್ರೀಮಠದಿಂದ ಒಂದು ಸಾವಿರ ದೇಣಿಗೆ ನೀಡಿ ಮುಂದಿನ ವರ್ಷಕ್ಕೆ ಉದ್ಘಾಟನೆಯಾಗಲಿ ಎಂದು ಹರಿಸಿದರು.</p>.<p>ಇಲ್ಲಿನ ಮಳೆರಾಜ ಮಠದ ಮಳೆಯಪ್ಪ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳು, ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>