<p><strong>ಉಗರಗೋಳ</strong>: ಗ್ರಾಮದ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಕಾರ್ತೀಕ ಮಾಸದ ಸೋಮವಾರದ ಪ್ರಯುಕ್ತ, ವಾರ್ಷಿಕ ಜಾತ್ರೆ ಸಡಗರದಿಂದ ನಡೆಯಿತು. ಗದ್ದುಗೆಗೆ ಮಹಾ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ, ಪೂಜೆ, ಮಹಾಮಂಗಳಾರತಿ ನೆರವೇರಿತು.</p>.<p>ಮಠದ ಆವರಣದಿಂದ ಹೂರಟ ಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ, ಮತ್ತೆ ಮಠದ ಆವರಣ ತಲುಪಿತು. ಕರಡಿ ಮಜಲು, ವೀರಗಾಸೆ, ಡೊಳ್ಳುಕುಣಿತ, ಭಜನೆ, ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಗಮನ ಸೆಳೆದವು.</p>.<p>ಬೆಂಗಳೂರಿನ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಮಹೇಶ ಹಿರೇಮಠ ಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.</p>.<p>ಬಸನಗೌಡ ಪಾಟೀಲ, ಸಿದ್ದನಗೌಡ ಗೂಡರಾಶಿ, ಗಿರೀಶ ಸತ್ತಿಗೇರಿ, ಸುನೀಲ ಬೆಳವಡಿ, ಜಗದನಗೌಡ ಗಂದಿಗವಾಡ, ವಿಜಯ ನರಗುಂದ, ಪರಪ್ಪ ಸರಾಫ್, ಗೌಡಪ್ಪ ಗುಡೆನ್ನವರ, ಮಹಾದೇವ ಹಿರೇಹೊಳಿ, ಬಸವರಾಜ ಸಕಪ್ಪನವರ, ಮಹಾದೇವಪ್ಪ ಸಿದ್ದಾಪುರ, ಸಿದ್ದಯ್ಯ ಶಿವಪ್ಪಯ್ಯನಮಠ ಇದ್ದರು. ಭಕ್ತರಿಗೆ ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಗರಗೋಳ</strong>: ಗ್ರಾಮದ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ಕಾರ್ತೀಕ ಮಾಸದ ಸೋಮವಾರದ ಪ್ರಯುಕ್ತ, ವಾರ್ಷಿಕ ಜಾತ್ರೆ ಸಡಗರದಿಂದ ನಡೆಯಿತು. ಗದ್ದುಗೆಗೆ ಮಹಾ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ, ಪೂಜೆ, ಮಹಾಮಂಗಳಾರತಿ ನೆರವೇರಿತು.</p>.<p>ಮಠದ ಆವರಣದಿಂದ ಹೂರಟ ಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ, ಮತ್ತೆ ಮಠದ ಆವರಣ ತಲುಪಿತು. ಕರಡಿ ಮಜಲು, ವೀರಗಾಸೆ, ಡೊಳ್ಳುಕುಣಿತ, ಭಜನೆ, ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಗಮನ ಸೆಳೆದವು.</p>.<p>ಬೆಂಗಳೂರಿನ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಮಹೇಶ ಹಿರೇಮಠ ಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.</p>.<p>ಬಸನಗೌಡ ಪಾಟೀಲ, ಸಿದ್ದನಗೌಡ ಗೂಡರಾಶಿ, ಗಿರೀಶ ಸತ್ತಿಗೇರಿ, ಸುನೀಲ ಬೆಳವಡಿ, ಜಗದನಗೌಡ ಗಂದಿಗವಾಡ, ವಿಜಯ ನರಗುಂದ, ಪರಪ್ಪ ಸರಾಫ್, ಗೌಡಪ್ಪ ಗುಡೆನ್ನವರ, ಮಹಾದೇವ ಹಿರೇಹೊಳಿ, ಬಸವರಾಜ ಸಕಪ್ಪನವರ, ಮಹಾದೇವಪ್ಪ ಸಿದ್ದಾಪುರ, ಸಿದ್ದಯ್ಯ ಶಿವಪ್ಪಯ್ಯನಮಠ ಇದ್ದರು. ಭಕ್ತರಿಗೆ ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>