<p>ಪ್ರಸನ್ನ ಕುಲಕರ್ಣಿ</p>.<p><strong>ಖಾನಾಪುರ:</strong> ತಾಲ್ಲೂಕಿನ ಜಾಂಬೋಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುಟ್ಟ ಗ್ರಾಮ ವಿಜಯನಗರ(ಗೌಳಿವಾಡಾ) ಜನರ ಪಾಲಿಗೆ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಸ್ವಾತಂತ್ರ್ಯ ದೊರೆತು 77 ವರ್ಷಗಳ ನಂತರ, ಈ ಗ್ರಾಮಸ್ಥರು ತಮ್ಮೂರಿಗೆ ಸಂಪರ್ಕ ರಸ್ತೆ ಪಡೆದಿದ್ದಾರೆ.</p>.<p>ಖಾನಾಪುರ ಪಟ್ಟಣದಿಂದ 18 ಕಿ.ಮೀ, ಜಾಂಬೋಟಿಯಿಂದ 6 ಕಿ.ಮೀ ದೂರದಲ್ಲಿ ವಿಜಯನಗರ ಇದೆ. ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯಿಂದ 3 ಕಿ.ಮೀ ಒಳಗೆ, ತಗ್ಗು ಪ್ರದೇಶದಲ್ಲಿ ನೆಲೆನಿಂತ ಊರಿನ ಜನಸಂಖ್ಯೆ ಸುಮಾರು 1,000 ಇದೆ. ಗೌಳಿ ಸಮುದಾಯದ 200 ಕುಟುಂಬ ವಾಸಿಸುತ್ತಿವೆ.</p>.<p>ಹೈನುಗಾರಿಕೆ ಮತ್ತು ಕೃಷಿಯೇ ಗ್ರಾಮಸ್ಥರ ಪ್ರಮುಖ ಕಸುಬು. ಈ ಗ್ರಾಮಕ್ಕೆ ಮುಂಚೆ ಉತ್ತಮ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಬಹುತೇಕ ರಸ್ತೆ ಇಳಿಜಾರಿನಿಂದ ಕೂಡಿದ್ದರಿಂದ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ಧಾರಾಕಾರ ಸುರಿಯುವ ಮಳೆಯಿಂದಾಗಿ ಮಣ್ಣಿನ ರಸ್ತೆ ಕೆಸರುಮಯವಾಗುತ್ತಿತ್ತು. ಸರ್ಕಸ್ ಮಾಡುತ್ತಲೇ ಜನ ಸಂಚರಿಸುತ್ತಿದ್ದರು. ಹಲವು ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. </p>.<p>ಪ್ರತಿವರ್ಷ ಮಳೆಗಾಲ ಮುಗಿದ ನಂತರ ಗ್ರಾಮ ಪಂಚಾಯಿತಿಯವರು ಹಾಗೂ ಗ್ರಾಮದ ಹಿರಿಯರು ಸೇರಿಕೊಂಡು ಅಲ್ಪ ಹಣದಲ್ಲಿ ರಸ್ತೆ ದುರಸ್ತಿ ಮಾಡಿಕೊಂಡು ಬಳಸುತ್ತಿದ್ದರು.</p>.<p>ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಜತ್ತ–ಜಾಂಬೋಟಿ ಹೆದ್ದಾರಿಯಿಂದ ವಿಜಯನಗರ ಗ್ರಾಮದವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಿದ್ದರು. ಈಗ ಸುಸಜ್ಜಿತ ರಸ್ತೆ ನಿರ್ಮಾಣಗೊಂಡಿದ್ದು, ಜನರು ಸಂತಸಗೊಂಡಿದ್ದಾರೆ.</p>.<p>‘ಅರಣ್ಯದಿಂದ ಸುತ್ತುವರಿದ, ಇಳಿಜಾರು ಪ್ರದೇಶದಲ್ಲಿರುವ ವಿಜಯನಗರ ಗ್ರಾಮಕ್ಕೆ ರಸ್ತೆ ಅವಶ್ಯಕತೆ ಇರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೆವು. ಹಾಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ನೀಡಿದ್ದರು. ಈ ಅನುದಾನದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ’ ಎಂದು ಜಾಂಬೋಟಿ ಪಿಡಿಒ<br>ಪ್ರಕಾಶ ಕುಡಚಿ ತಿಳಿಸಿದರು.</p>.<div><blockquote> ಇಷ್ಟುದಿನ ನಮ್ಮೂರಿಗೆ ಸರಿಯಾದ ರಸ್ತೆ ಇಲ್ಲದ್ದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೆವು. ಈಗ ರಸ್ತೆ ನಿರ್ಮಾಣವಾದ ಕಾರಣ ಖುಷಿಯಾಗಿದೆ </blockquote><span class="attribution">ಬೊಮ್ಮು ಗ್ರಾಮಸ್ಥ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಸನ್ನ ಕುಲಕರ್ಣಿ</p>.<p><strong>ಖಾನಾಪುರ:</strong> ತಾಲ್ಲೂಕಿನ ಜಾಂಬೋಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುಟ್ಟ ಗ್ರಾಮ ವಿಜಯನಗರ(ಗೌಳಿವಾಡಾ) ಜನರ ಪಾಲಿಗೆ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಸ್ವಾತಂತ್ರ್ಯ ದೊರೆತು 77 ವರ್ಷಗಳ ನಂತರ, ಈ ಗ್ರಾಮಸ್ಥರು ತಮ್ಮೂರಿಗೆ ಸಂಪರ್ಕ ರಸ್ತೆ ಪಡೆದಿದ್ದಾರೆ.</p>.<p>ಖಾನಾಪುರ ಪಟ್ಟಣದಿಂದ 18 ಕಿ.ಮೀ, ಜಾಂಬೋಟಿಯಿಂದ 6 ಕಿ.ಮೀ ದೂರದಲ್ಲಿ ವಿಜಯನಗರ ಇದೆ. ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯಿಂದ 3 ಕಿ.ಮೀ ಒಳಗೆ, ತಗ್ಗು ಪ್ರದೇಶದಲ್ಲಿ ನೆಲೆನಿಂತ ಊರಿನ ಜನಸಂಖ್ಯೆ ಸುಮಾರು 1,000 ಇದೆ. ಗೌಳಿ ಸಮುದಾಯದ 200 ಕುಟುಂಬ ವಾಸಿಸುತ್ತಿವೆ.</p>.<p>ಹೈನುಗಾರಿಕೆ ಮತ್ತು ಕೃಷಿಯೇ ಗ್ರಾಮಸ್ಥರ ಪ್ರಮುಖ ಕಸುಬು. ಈ ಗ್ರಾಮಕ್ಕೆ ಮುಂಚೆ ಉತ್ತಮ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಬಹುತೇಕ ರಸ್ತೆ ಇಳಿಜಾರಿನಿಂದ ಕೂಡಿದ್ದರಿಂದ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ಧಾರಾಕಾರ ಸುರಿಯುವ ಮಳೆಯಿಂದಾಗಿ ಮಣ್ಣಿನ ರಸ್ತೆ ಕೆಸರುಮಯವಾಗುತ್ತಿತ್ತು. ಸರ್ಕಸ್ ಮಾಡುತ್ತಲೇ ಜನ ಸಂಚರಿಸುತ್ತಿದ್ದರು. ಹಲವು ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. </p>.<p>ಪ್ರತಿವರ್ಷ ಮಳೆಗಾಲ ಮುಗಿದ ನಂತರ ಗ್ರಾಮ ಪಂಚಾಯಿತಿಯವರು ಹಾಗೂ ಗ್ರಾಮದ ಹಿರಿಯರು ಸೇರಿಕೊಂಡು ಅಲ್ಪ ಹಣದಲ್ಲಿ ರಸ್ತೆ ದುರಸ್ತಿ ಮಾಡಿಕೊಂಡು ಬಳಸುತ್ತಿದ್ದರು.</p>.<p>ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಜತ್ತ–ಜಾಂಬೋಟಿ ಹೆದ್ದಾರಿಯಿಂದ ವಿಜಯನಗರ ಗ್ರಾಮದವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಿದ್ದರು. ಈಗ ಸುಸಜ್ಜಿತ ರಸ್ತೆ ನಿರ್ಮಾಣಗೊಂಡಿದ್ದು, ಜನರು ಸಂತಸಗೊಂಡಿದ್ದಾರೆ.</p>.<p>‘ಅರಣ್ಯದಿಂದ ಸುತ್ತುವರಿದ, ಇಳಿಜಾರು ಪ್ರದೇಶದಲ್ಲಿರುವ ವಿಜಯನಗರ ಗ್ರಾಮಕ್ಕೆ ರಸ್ತೆ ಅವಶ್ಯಕತೆ ಇರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೆವು. ಹಾಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ನೀಡಿದ್ದರು. ಈ ಅನುದಾನದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ’ ಎಂದು ಜಾಂಬೋಟಿ ಪಿಡಿಒ<br>ಪ್ರಕಾಶ ಕುಡಚಿ ತಿಳಿಸಿದರು.</p>.<div><blockquote> ಇಷ್ಟುದಿನ ನಮ್ಮೂರಿಗೆ ಸರಿಯಾದ ರಸ್ತೆ ಇಲ್ಲದ್ದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೆವು. ಈಗ ರಸ್ತೆ ನಿರ್ಮಾಣವಾದ ಕಾರಣ ಖುಷಿಯಾಗಿದೆ </blockquote><span class="attribution">ಬೊಮ್ಮು ಗ್ರಾಮಸ್ಥ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>