<p><strong>ಯರಗಟಿ</strong>: ಕಬ್ಬಿಗೆ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ<br> ಹಮ್ಮಿಕೊಂಡಿದ್ದ ಧರಣಿ ಬುಧವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಬಾಗಲಕೋಟಿ-ಬೆಳಗಾವಿ, ಗೋಕಾಕ- ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ನಿರಂತರ ನಾಲ್ಕು ದಿನದಿಂದ ಸಾರಿಗೆ ಬಸ್, ಖಾಸಗಿ ವಾಹನಗಳು ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡುಂತಾಗಿದೆ.</p>.<p>ಸವದತ್ತಿ ರೈತ ಮುಖಂಡ ಮಡಿವಾಳಪ್ಪ ಬಿದರಿ, ಮಾತನಾಡಿ, ಕಬ್ಬಿನ ದರಕ್ಕೆ ಪ್ರತಿ ವರ್ಷ ಪ್ರತಿಭಟನೆಗಳು<br> ನಡೆದರೂ ಕಾರ್ಖಾನೆ ಮಾಲೀಕರಿಗೆ ಸರ್ಕಾರ ಕಿವಿ ಹಿಂಡುವ ಕೆಲಸ ಮಾಡಿತ್ತಿಲ್ಲ.ಇನ್ನು ನಿರ್ಲಕ್ಷಿಸಿದರೆ<br>ಬರುವ ದಿನಗಳಲ್ಲಿ ಹೋರಾಟ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.</p>.<p>ಗೋಕಾಕ ರೈತ ಮುಖಂಡ ಉದಯ ಕರ್ಜಗಿಮಠ ಮಾತನಾಡಿ, ‘ಸರ್ಕಾರ ಕಾರ್ಖಾನೆ ಮಾಲೀಕರಿಗೆ ಕಟ್ಟುನಿಟ್ಟನ ಆದೇಶ ನೀಡಿ ಟನ್ ಕಬ್ಬಿಗೆ ₹3500 ಪಾವತಿ ಮಾಡಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.</p>.<p>ಪಂಚನಗೌಡ ದ್ಯಾಮಗೌಡ, ಉಮೇಶ ಬಾಳಿ, ಮಹಾಂತೇಶ ತೋಟಗಿ , ಸೋಮು ರೈನಾಪೂರ ಯಕ್ಕರಪ್ಪ ತಳವಾರ, ಗೌಡಪ್ಪ ಸವದತ್ತಿ, ಪಕೀರಪ್ಪಕೀಲಾರಿ, ನಾಗಪ್ಪ ಪುಂಜಿ, ರಂಗಪ್ಪ ಗಂಗರಡ್ಡಿ <br /> ಲಕ್ಷಮನ ಬಜ್ಜನ್ನವರ, ಶಿವಾನಂದ ನಾಯ್ಕ, ಸುರೇಶ ಬಂಟನೂರ, ಶಿವಾನಂದ ಕರಿಗೋಣ್ಣವರ ಇದ್ದರು.</p>.<p>ಯರಗಟ್ಟಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಯುತ್ತಿರುವ ರೈತರ ಧರಣಿಯಲ್ಲಿ ರೈತ ಮುಖಂಡ ಮಡಿವಾಳಪ್ಪ ಬಿದರಿ ಮಾತನಾಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗಟಿ</strong>: ಕಬ್ಬಿಗೆ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ<br> ಹಮ್ಮಿಕೊಂಡಿದ್ದ ಧರಣಿ ಬುಧವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಬಾಗಲಕೋಟಿ-ಬೆಳಗಾವಿ, ಗೋಕಾಕ- ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ನಿರಂತರ ನಾಲ್ಕು ದಿನದಿಂದ ಸಾರಿಗೆ ಬಸ್, ಖಾಸಗಿ ವಾಹನಗಳು ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡುಂತಾಗಿದೆ.</p>.<p>ಸವದತ್ತಿ ರೈತ ಮುಖಂಡ ಮಡಿವಾಳಪ್ಪ ಬಿದರಿ, ಮಾತನಾಡಿ, ಕಬ್ಬಿನ ದರಕ್ಕೆ ಪ್ರತಿ ವರ್ಷ ಪ್ರತಿಭಟನೆಗಳು<br> ನಡೆದರೂ ಕಾರ್ಖಾನೆ ಮಾಲೀಕರಿಗೆ ಸರ್ಕಾರ ಕಿವಿ ಹಿಂಡುವ ಕೆಲಸ ಮಾಡಿತ್ತಿಲ್ಲ.ಇನ್ನು ನಿರ್ಲಕ್ಷಿಸಿದರೆ<br>ಬರುವ ದಿನಗಳಲ್ಲಿ ಹೋರಾಟ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.</p>.<p>ಗೋಕಾಕ ರೈತ ಮುಖಂಡ ಉದಯ ಕರ್ಜಗಿಮಠ ಮಾತನಾಡಿ, ‘ಸರ್ಕಾರ ಕಾರ್ಖಾನೆ ಮಾಲೀಕರಿಗೆ ಕಟ್ಟುನಿಟ್ಟನ ಆದೇಶ ನೀಡಿ ಟನ್ ಕಬ್ಬಿಗೆ ₹3500 ಪಾವತಿ ಮಾಡಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.</p>.<p>ಪಂಚನಗೌಡ ದ್ಯಾಮಗೌಡ, ಉಮೇಶ ಬಾಳಿ, ಮಹಾಂತೇಶ ತೋಟಗಿ , ಸೋಮು ರೈನಾಪೂರ ಯಕ್ಕರಪ್ಪ ತಳವಾರ, ಗೌಡಪ್ಪ ಸವದತ್ತಿ, ಪಕೀರಪ್ಪಕೀಲಾರಿ, ನಾಗಪ್ಪ ಪುಂಜಿ, ರಂಗಪ್ಪ ಗಂಗರಡ್ಡಿ <br /> ಲಕ್ಷಮನ ಬಜ್ಜನ್ನವರ, ಶಿವಾನಂದ ನಾಯ್ಕ, ಸುರೇಶ ಬಂಟನೂರ, ಶಿವಾನಂದ ಕರಿಗೋಣ್ಣವರ ಇದ್ದರು.</p>.<p>ಯರಗಟ್ಟಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಯುತ್ತಿರುವ ರೈತರ ಧರಣಿಯಲ್ಲಿ ರೈತ ಮುಖಂಡ ಮಡಿವಾಳಪ್ಪ ಬಿದರಿ ಮಾತನಾಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>