<p><strong>ಬೆಳಗಾವಿ: </strong>ವಿಶ್ವ ಕನ್ನಡ ಸಮ್ಮೇಳನದ ವರದಿ ಮಾಡಲು ಮುಖ್ಯ ವೇದಿಕೆ ಪಕ್ಕದಲ್ಲಿರುವ ಫಿಸಿಯೋಥೆರಪಿ ಕಾಲೇಜಿನಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ತೆರೆಯಲಾಗಿದೆ.ಕೇಂದ್ರದಲ್ಲಿ 100 ಕಂಪ್ಯೂಟರ್ಗಳನ್ನು ಅಳವಡಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾಧ್ಯಮ ಕೇಂದ್ರದ ಹೊರಗಡೆ ನಿಂತೇ ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.<br /> <br /> ದೂರವಾಣಿ, ಫ್ಯಾಕ್ಸ್, ಇಂಟರನೆಟ್, ಝೆರಾಕ್ಸ್ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಫೋಟೋಶಾಪ್, ಪೇಜ್ಮೇಕರ್ ಸೇರಿದಂತೆ ಹಲವಾರು ಸಾಫ್ಟ್ವೇರ್ಗಳನ್ನು ಎಲ್ಲ ಕಂಪ್ಯೂಟರ್ಗಳಿಗೆ ಅಳವಡಿಸಲಾಗಿದೆ.<br /> <br /> ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಿಗೆ ಇಂತಿಷ್ಟು ಎಂದು ಕಂಪ್ಯೂಟರ್ಗಳನ್ನು ನಿಗದಿ ಪಡಿಸಲಾಗಿದ್ದು, ತಾಂತ್ರಿಕ ತೊಂದರೆ ಎದುರಾದರೆ ಸಹಾಯಕ್ಕೆ ನುರಿತ ಸಿಬ್ಬಂದಿಯನ್ನು ಒದಗಿಸಲಾಗಿದೆ. ಮಾಧ್ಯಮ ಕೇಂದ್ರಕ್ಕೆ ಸತತ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ದಿನದ 24 ಗಂಟೆಯೂ ಮಾಧ್ಯಮ ಕೇಂದ್ರ ಕಾರ್ಯ ನಿರ್ವಹಿಸಲಿದೆ. <br /> <br /> ಜನರು ಕಾತುರದಿಂದ ಕಾಯುತ್ತಿರುವ ಸಮ್ಮೇಳನದ ವರದಿಗಳನ್ನು ಕ್ಷಣ ಮಾತ್ರದಲ್ಲಿ ಬೆಳಗಾವಿಯಿಂದ ಆಯಾ ಪತ್ರಿಕೆಗಳ ಮುಖ್ಯ ಕಚೇರಿಗೆ ಕಳುಹಿಸುವ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ ಎನ್ನುತ್ತಾರೆ ವಾರ್ತಾ ಇಲಾಖೆಯ ಉಪನಿರ್ದೇಶಕ ಬಸವರಾಜ ಕಂಬಿ.<br /> <br /> <strong>ಸಂಚಾರ ವ್ಯವಸ್ಥೆ;</strong> ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಕಲಾವಿದರ ಸಂಚಾರ ವ್ಯವಸ್ಥೆಗಾಗಿ ವಿವಿಧ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ವಾಹನಗಳು ನಗರಕ್ಕೆ ಆಗಮಿಸಿವೆ.<br /> ಧಾರವಾಡ, ಬಾಗಲಕೋಟೆ, ವಿಜಾಪುರ, ಹಾವೇರಿ, ಗದಗ, ಉಡುಪಿ, ಬಳ್ಳಾರಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ವಾಹನಗಳನ್ನು ಸಮ್ಮೇಳನಕ್ಕಾಗಿ ತರಿಸಿಕೊಳ್ಳಲಾಗಿದೆ. ವಾಹನಗಳಿಗೆ ಪ್ರತ್ಯೇಕ ಸಂಖ್ಯೆ ನೀಡಲಾಗುತ್ತಿದ್ದು, ಇಂತಹ ಸಂಖ್ಯೆಯ ವಾಹನ ಇಂತಹ ಅತಿಥಿಗಳಿಗೆ ಎಂದು ನಿಗದಿಪಡಿಸಲಾಗಿದೆ.<br /> <br /> ಆ ವಾಹನವು ಸಮ್ಮೇಳನ ಮುಗಿಯುವವರೆಗೂ ಅವರಿಗೆ ಮೀಸಲಾಗಿರಿಸಲಾಗುತ್ತದೆ. ಹೆಚ್ಚುವರಿಯಾಗಿ ವಾಹನಗಳನ್ನು ಕಾಯ್ದಿರಿಸಲಾಗಿದ್ದು, ಅವಶ್ಯ ಬಿದ್ದಲ್ಲಿ ಬಳಸಿಕೊಳ್ಳಲಾಗುತ್ತದೆ.<br /> ಶಾಲಾ, ಕಾಲೇಜುಗಳ 2,00 ವಾಹನಗಳನ್ನು ಸಮ್ಮೇಳನಕ್ಕಾಗಿ ತೆಗೆದುಕೊಳ್ಳಲಾಗಿದೆ. ಆ ಕಾರಣಕ್ಕಾಗಿಯೇ ಸಮ್ಮೇಳನ ಮುಗಿಯುವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪರ್ಯಾಯ ಸಂಚಾರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೋರಿಕೊಂಡಿದ್ದಾರೆ.<br /> <br /> ಶಾಲಾ ವಾಹನಗಳನ್ನು ಕಲಾವಿದರ ತಂಡಗಳ ಸಂಚಾರಕ್ಕೆ ಬಳಸಲಾಗುತ್ತದೆ. ಪ್ರತಿ ತಂಡಗಳಿಗೆ ವಾಹನಗಳನ್ನು ನೀಡಲಾಗುತ್ತಿದೆ. ಅವರ ವಸತಿ ಸ್ಥಳದಿಂದ ವೇದಿಕೆಗೆ ಹೋಗಲು ಬಳಸಬಹುದಾಗಿದೆ.ಇಷ್ಟೊಂದು ವಾಹನಗಳ ಸಂಚಾರದಿಂದ ನಗರದಲ್ಲಿ ಉಂಟಾಗಬಹುದಾದ ಸಂಚಾರ ಒತ್ತಡವನ್ನು ತಪ್ಪಿಸಲು ಪೊಲೀಸ್ ಇಲಾಖೆ ಕೆಲವೊಂದು ಮಾರ್ಗಗಳ ಬದಲಾವಣೆಗೆ ಕ್ರಮ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ವಿಶ್ವ ಕನ್ನಡ ಸಮ್ಮೇಳನದ ವರದಿ ಮಾಡಲು ಮುಖ್ಯ ವೇದಿಕೆ ಪಕ್ಕದಲ್ಲಿರುವ ಫಿಸಿಯೋಥೆರಪಿ ಕಾಲೇಜಿನಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ತೆರೆಯಲಾಗಿದೆ.ಕೇಂದ್ರದಲ್ಲಿ 100 ಕಂಪ್ಯೂಟರ್ಗಳನ್ನು ಅಳವಡಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾಧ್ಯಮ ಕೇಂದ್ರದ ಹೊರಗಡೆ ನಿಂತೇ ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.<br /> <br /> ದೂರವಾಣಿ, ಫ್ಯಾಕ್ಸ್, ಇಂಟರನೆಟ್, ಝೆರಾಕ್ಸ್ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಫೋಟೋಶಾಪ್, ಪೇಜ್ಮೇಕರ್ ಸೇರಿದಂತೆ ಹಲವಾರು ಸಾಫ್ಟ್ವೇರ್ಗಳನ್ನು ಎಲ್ಲ ಕಂಪ್ಯೂಟರ್ಗಳಿಗೆ ಅಳವಡಿಸಲಾಗಿದೆ.<br /> <br /> ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಿಗೆ ಇಂತಿಷ್ಟು ಎಂದು ಕಂಪ್ಯೂಟರ್ಗಳನ್ನು ನಿಗದಿ ಪಡಿಸಲಾಗಿದ್ದು, ತಾಂತ್ರಿಕ ತೊಂದರೆ ಎದುರಾದರೆ ಸಹಾಯಕ್ಕೆ ನುರಿತ ಸಿಬ್ಬಂದಿಯನ್ನು ಒದಗಿಸಲಾಗಿದೆ. ಮಾಧ್ಯಮ ಕೇಂದ್ರಕ್ಕೆ ಸತತ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ದಿನದ 24 ಗಂಟೆಯೂ ಮಾಧ್ಯಮ ಕೇಂದ್ರ ಕಾರ್ಯ ನಿರ್ವಹಿಸಲಿದೆ. <br /> <br /> ಜನರು ಕಾತುರದಿಂದ ಕಾಯುತ್ತಿರುವ ಸಮ್ಮೇಳನದ ವರದಿಗಳನ್ನು ಕ್ಷಣ ಮಾತ್ರದಲ್ಲಿ ಬೆಳಗಾವಿಯಿಂದ ಆಯಾ ಪತ್ರಿಕೆಗಳ ಮುಖ್ಯ ಕಚೇರಿಗೆ ಕಳುಹಿಸುವ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ ಎನ್ನುತ್ತಾರೆ ವಾರ್ತಾ ಇಲಾಖೆಯ ಉಪನಿರ್ದೇಶಕ ಬಸವರಾಜ ಕಂಬಿ.<br /> <br /> <strong>ಸಂಚಾರ ವ್ಯವಸ್ಥೆ;</strong> ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಕಲಾವಿದರ ಸಂಚಾರ ವ್ಯವಸ್ಥೆಗಾಗಿ ವಿವಿಧ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ವಾಹನಗಳು ನಗರಕ್ಕೆ ಆಗಮಿಸಿವೆ.<br /> ಧಾರವಾಡ, ಬಾಗಲಕೋಟೆ, ವಿಜಾಪುರ, ಹಾವೇರಿ, ಗದಗ, ಉಡುಪಿ, ಬಳ್ಳಾರಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ವಾಹನಗಳನ್ನು ಸಮ್ಮೇಳನಕ್ಕಾಗಿ ತರಿಸಿಕೊಳ್ಳಲಾಗಿದೆ. ವಾಹನಗಳಿಗೆ ಪ್ರತ್ಯೇಕ ಸಂಖ್ಯೆ ನೀಡಲಾಗುತ್ತಿದ್ದು, ಇಂತಹ ಸಂಖ್ಯೆಯ ವಾಹನ ಇಂತಹ ಅತಿಥಿಗಳಿಗೆ ಎಂದು ನಿಗದಿಪಡಿಸಲಾಗಿದೆ.<br /> <br /> ಆ ವಾಹನವು ಸಮ್ಮೇಳನ ಮುಗಿಯುವವರೆಗೂ ಅವರಿಗೆ ಮೀಸಲಾಗಿರಿಸಲಾಗುತ್ತದೆ. ಹೆಚ್ಚುವರಿಯಾಗಿ ವಾಹನಗಳನ್ನು ಕಾಯ್ದಿರಿಸಲಾಗಿದ್ದು, ಅವಶ್ಯ ಬಿದ್ದಲ್ಲಿ ಬಳಸಿಕೊಳ್ಳಲಾಗುತ್ತದೆ.<br /> ಶಾಲಾ, ಕಾಲೇಜುಗಳ 2,00 ವಾಹನಗಳನ್ನು ಸಮ್ಮೇಳನಕ್ಕಾಗಿ ತೆಗೆದುಕೊಳ್ಳಲಾಗಿದೆ. ಆ ಕಾರಣಕ್ಕಾಗಿಯೇ ಸಮ್ಮೇಳನ ಮುಗಿಯುವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪರ್ಯಾಯ ಸಂಚಾರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೋರಿಕೊಂಡಿದ್ದಾರೆ.<br /> <br /> ಶಾಲಾ ವಾಹನಗಳನ್ನು ಕಲಾವಿದರ ತಂಡಗಳ ಸಂಚಾರಕ್ಕೆ ಬಳಸಲಾಗುತ್ತದೆ. ಪ್ರತಿ ತಂಡಗಳಿಗೆ ವಾಹನಗಳನ್ನು ನೀಡಲಾಗುತ್ತಿದೆ. ಅವರ ವಸತಿ ಸ್ಥಳದಿಂದ ವೇದಿಕೆಗೆ ಹೋಗಲು ಬಳಸಬಹುದಾಗಿದೆ.ಇಷ್ಟೊಂದು ವಾಹನಗಳ ಸಂಚಾರದಿಂದ ನಗರದಲ್ಲಿ ಉಂಟಾಗಬಹುದಾದ ಸಂಚಾರ ಒತ್ತಡವನ್ನು ತಪ್ಪಿಸಲು ಪೊಲೀಸ್ ಇಲಾಖೆ ಕೆಲವೊಂದು ಮಾರ್ಗಗಳ ಬದಲಾವಣೆಗೆ ಕ್ರಮ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>