ಕಲಾವಿದರ ಶೋಭಾಯಾತ್ರೆ ಮತ್ತು ತುಂಗಾರತಿ ಸೇರಿದ ಎರಡು ಕಾರ್ಯಕ್ರಮಗಳನ್ನಷ್ಟೇ ಉತ್ಸವದಲ್ಲಿ ಆಯೋಜಿಸಲಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮಗಳೂ ಇಲ್ಲದ ಉತ್ಸವಕ್ಕೆ ಇನ್ನು ಐದು ದಿನಗಳಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ಈ ನಡುವೆ, ಉತ್ಸವವನ್ನು ಮೂರು ದಿನ ನಡೆಸದಿದ್ದರೆ ಮುಂದೂಡಬೇಕು ಅಥವಾ ರದ್ದು ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಳೂ ನಡೆದಿವೆ.