ಜ. 14ರಂದು ಕೂಡಲಸಂಗಮದಿಂದ ಆರಂಭಗೊಂಡಿರುವ ಪಾದಯಾತ್ರೆ ಬುಧವಾರ ಕೊಪ್ಪಳದ ಹುಲಿಗಿ ತಲುಪಿತ್ತು. ಗುರುವಾರ ಬೆಳಿಗ್ಗೆ ಅಲ್ಲಿಂದ ಪ್ರಾರಂಭಗೊಂಡ ಪಾದಯಾತ್ರೆ ಮಧ್ಯಾಹ್ನ ನಗರ ಹೊರವಲಯದ ಗುಂಡಾ ಸಸ್ಯ ಉದ್ಯಾನ ಬಂದು ಸೇರಿತು. ಅವರಿಗೆ ಸಮಾಜದ ಮುಖಂಡರಾದ ವಿಜಯಾನಂದ ಕಾಶಪ್ಪನವರ, ಅಮರೇಶ ಕರಡಿ, ರವಿಕಾಂತ ಪಾಟೀಲ, ನಾಗನಗೌಡ, ಮಾವಿನಹಳ್ಳಿ ಬಸವರಾಜ, ಶಿವಾನಂದ, ವೀರೇಶ ಸೇರಿದಂತೆ ಹಲವರು ಸಾಥ್ ನೀಡಿದರು.