ಈ ಹಿಂದೆ ಎಳ್ಳು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು ಅದನ್ನು ಕೈಬಿಟ್ಟು ಮೆಕ್ಕೆಜೋಳ, ಶೇಂಗಾದತ್ತ ಮುಖ ಮಾಡಿದ್ದಾರೆ. ಆದರೆ, ಗುರುಸ್ವಾಮಿ ಅದರಿಂದ ವಿಚಲಿತರಾಗದೆ ಪ್ರಯೋಗಕ್ಕೆ ಮುಂದಾಗಿ ಯಶಸ್ಸು ಕಂಡಿದ್ದಾರೆ. ಇತರೆ ರೈತರು ಇವರ ಯಶಸ್ಸು ನೋಡಿ ಅವರು ಮನಸ್ಸು ಬದಲಿಸುವ ಹಂತಕ್ಕೆ ಬಂದಿದ್ದಾರೆ.