ಪದವಿ ಮುಗಿಸಿರುವ ಮಂಜುನಾಥ ಸರ್ಕಾರಿ ನೌಕರಿ ಹುಡುಕುವ ಗೋಜಿಗೆ ಹೋಗದೆ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅರ್ಧ ಎಕರೆಯಲ್ಲಿ ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಗಲದ ಅಂತರದಲ್ಲಿ ಒಟ್ಟು ಎರಡು ಸಾವಿರ ಗಿಡಗಳನ್ನು ಬೆಳೆದಿದ್ದಾರೆ. 50 ದಿನಗಳಲ್ಲಿ ಫಸಲು ಕೈ ಸೇರಿದೆ. ಮೊಳಕೆಯೊಡೆದ ಇಪ್ಪತ್ತು ದಿನಗಳಲ್ಲಿ ಬಳ್ಳಿ ಏರಲು ಗೂಟಗಳನ್ನು ಉಗಿಯಬೇಕು. ಗೂಟಕ್ಕೆ ಪ್ಲಾಸ್ಟಿಕ್ ದಾರ ಕಟ್ಟಿ, ಅದಕ್ಕೆ ಬಳ್ಳಿಗಳನ್ನು ಏರಿಸಿದ್ದಾರೆ. ನಾಲ್ಕು ಟ್ರ್ಯಾಕ್ಟರ್ ಸೆಗಣಿ ಗೊಬ್ಬರ ಹಾಕಿದ್ದಾರೆ. ಇದರಿಂದ ರೋಗ ಬಾಧಿಸಿಲ್ಲ.