ಗಾಂಧೀಜಿ ನಿಧನದ ನಂತರ ಅವರ ಚಿತಾಭಸ್ಮವನ್ನು ಇಲ್ಲಿಗೆ ತರಲಾಗಿತ್ತು. ಶಿಕ್ಷಕ ಬಿಂದು ಮಾಧವಎಂಬುವರು ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣಕ್ಕೆ ಗಾಂಧಿ ಚಿತಾಭಸ್ಮ ತಂದು, ಮಂಟಪ ಮಾಡಿ, ಅದಕ್ಕೆ ಹುತಾತ್ಮರ ಸ್ಮಾರಕ ಎಂದು ನಾಮಕರಣ ಮಾಡಿದರು. ಗಾಂಧೀಜಿಯವರ ನೆನಪು ಸದಾ ಜನಮಾನಸದಲ್ಲಿ ಉಳಿಯುವಂತೆ ಶ್ರಮಿಸಿದರು. ಆದರೆ, ಅದನ್ನು ಅಭಿವೃದ್ಧಿಗೊಳಿಸಬೇಕೆಂಬ ಹಕ್ಕೊತ್ತಾಯಕ್ಕೆ ಯಾರೊಬ್ಬರೂ ಇದುವರೆಗೆ ಕಿವಿಗೊಟ್ಟಿಲ್ಲ.