ಪಕ್ಷದ ಉಪಾಧ್ಯಕ್ಷ ನಜೀರ್ ಖಾನ್ ಮಾತನಾಡಿ, ರೈತ ಸಂಘದ ಆತ್ಮಾವಲೋಕನ ಸಭೆಯಲ್ಲಿದ್ದ ರೈತ ಆಂದೋಲನದ ಪ್ರಮುಖ ನಾಯಕ ರಾಕೇಶ್ ಟಿಕಾಯತ್ ಮೇಲೆ ಆರ್ಎಸ್ಎಸ್ನವರು ಮಸಿ ಎರಚಿ ದಾಳಿ ನಡೆಸಿದ್ದು ಅಕ್ಷಮ್ಯ, ಅವರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ಅಧ್ಯಕ್ಷ ವಲಿ ಬಾಷ, ಪ್ರಧಾನ ಕಾರ್ಯದರ್ಶಿ ಜೆ.ಹಬೀಬುಲ್ಲಾ, ಕಾರ್ಯದರ್ಶಿ ಇರ್ಫಾನ್ ಕಟಿಗಿ ಇತರರಿದ್ದರು.