ನಗರದ ಕೆ.ಎಸ್.ಪಿ.ಎಲ್. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಶ್ರೇಯಾ ಎಸ್. ಕದಂ (18) ಆತ್ಮಹತ್ಯೆಗೆ ಶರಣಾದವರು. ರೂಪ ಮೇಟಿ (18) ಗಾಯಗೊಂಡವರು. ಶ್ರೇಯಾ ಮೂಲತಃ ಭದ್ರಾವತಿಯವರು, ಇಲ್ಲಿನ ಈಶ್ವರ ನಗರದಲ್ಲಿ ವಾಸವಾಗಿದ್ದರು. ಅವರ ತಂದೆ ಜೆ.ಎಸ್.ಡಬ್ಲ್ಯೂ ಉದ್ಯೋಗಿ. ರೂಪ ಅವರು ಹಳೆ ಮೇದಾರ ರಸ್ತೆ ನಿವಾಸಿ.